Kagawad

ಶೇಡಬಾಳದ ಸುಪುತ್ರ, ರಾಷ್ಟ್ರಸಂತ ಆಚಾರ್ಯ ವಿದ್ಯಾನಂದ ಮುನಿ ಮಹಾರಾಜರ ಜನ್ಮ ಶತಾಬ್ದಿ ಮಹೋತ್ಸವ ಸಮಾರೋಪ ಸಮಾರಂಭ

Share

ಇಡೀ ವಿಶ್ವದಲ್ಲಿ ಜೈನ ಸಮಾಜ ತತ್ವಗಳನ್ನು ಪಾಲಿಸುತ ಜೀವಿಸುತ್ತಿರುವ ಸಮಾಜ. ಜೈನ ಸಮಾಜದ ನೇತೃತ್ವ ವಹಿಸಿರುವ ಸಮಾಜ ಸಾಮ್ರಾಟ ಶಾಂತಿಸಾಗರ್ ಮುನಿ ಮಹಾರಾಜರು ೨೦ನೇ ಶತಮಾನದಲ್ಲಿ ಜೈನ ಸಮಾಜದ ದಿಗಂಬರ ಮುನಿ ಪರಂಪರೆ ನಶಿಸಿ ಹೋಗುವ ಸಂದರ್ಭದಲ್ಲಿ ಪುನರ್ಜೀವಿತ ಗೊಳಿಸಿದ ಮಹಾರಾಜರು. ೨೧ನೇ ಶತಮಾನದ ರಾಷ್ಟ್ರಸಂತ ವಿದ್ಯಾನಂದ ಮುನಿ ಮಹಾರಾಜರು ಜೈನ ಸಂಸ್ಕೃತಿಯನ್ನು ಅಹಿಂಸಾ ಧರ್ಮವನ್ನು ವಿಶ್ವ ವ್ಯಾಪಿಯಾಗಿ ಪಸರಿಸಿದವರು. ದಕ್ಷಿಣ ಭಾರತದ ಜೈನ ಸಮಾಜದ ತಿರ್ಥಕ್ಷೇತ್ರವಾದ ಶ್ರವಣಬೆಳಗೊಳವನ್ನು ವಿಶ್ವ ಭೂಪಟದಲ್ಲಿ ಬಿಂಬಿಸಿದ ಶ್ರೇಯ ವಿದ್ಯಾನಂದ ಮುನಿರಾಜರದು ಎಂದು ಶ್ರವಣಬೆಳಗೊಳದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು ಶೇಡಬಾಳದಲ್ಲಿ ನುಡಿದರು.

ಶೇಡಬಾಳದ ವಿದ್ಯಾನಂದ ಮುನಿರಾಜ ಕನ್ನಡ ಪ್ರಾಥಮಿಕ ಶಾಲಾ ಆವರಣದಲ್ಲಿ ರಾಷ್ಟ್ರಸಂತ ವಿದ್ಯಾನಂದ ಮುನಿರಾಜ ಇವರ ಜನ್ಮ ಶತಾಬ್ದಿ ಮಹೋತ್ಸವದ ವರ್ಷಾಚರಣೆ ಸಮಾರೋಪ ಸಮಾರಂಭ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಚಾರುಕೀರ್ತಿ ಮಹಾರಾಜರು ತಮ್ಮ ವಿಚಾರ ವ್ಯಕ್ತಪಡಿಸಿದರು.

ರಾಷ್ಟ್ರಸಂಸ್ಥೆ ವಿದ್ಯಾನಂದ ಮುನಿರಾಜರು ಶೇಡಬಾಳದ ಸುಪುತ್ರರು, ಅವರು ಅಹಿಂಸಾ ತತ್ವಗಳು ವಿಶ್ವ ವ್ಯಾಪಿಯಾಗಿ ಪ್ರಸಾರ ಮಾಡಿದವರು. ಇವರ ಸ್ಮರಣಾರ್ಥವಾಗಿ ಶೇಡಬಾಳದ ರೈಲು ನಿಲ್ದಾಣಕ್ಕೆ ವಿದ್ಯಾನಂದ ಮುನಿರಾಜ ನಿಲ್ದಾಣ ಎಂದು ನಾಮಕರಣ ಮಾಡಿದರೆ ಬಹಳಷ್ಟು ಸಂತೋಷವಾಗುತ್ತದೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಶಾಸಕ ರಾಜು ಕಾಗೆ ಇವರಿಗೆ ತಮ್ಮ ಅಭಿಪ್ರಾಯ ತಿಳಿಸಿದರು.

ಉಭಯ ಶಾಸಕರು ಶ್ರವಣಬೆಳಗೊಳ ತೀರ್ಥಕ್ಷೇತ್ರದ ದರ್ಶನ ಪಡೆದುಕೊಳ್ಳಲು ಬಸ್ ವ್ಯವಸ್ಥೆ ಮಾಡಿದ್ದು, ಇದು ಗೌರವ ತಂದಿದೆ ಇದರೊಂದಿಗೆ ವಾರದಲ್ಲಿ ಒಂದು ದಿನ ರೈಲು ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಇವರು ವಿಧಾನಸಭೆಯಲ್ಲಿ ಜೈನ ಸಮಾಜದ ಕಾಂಗ್ರೆಸ್ ಪಕ್ಷಕ್ಕೆ ಹಸ್ತ ಚಿನ್ನ ನೀಡಿರುವ ಕೊಡುಗೆ ಬಗ್ಗೆ ಪ್ರಸ್ತಾಪಿಸಿ. ವಿದ್ಯಾನಂದ ಮುನಿರಾಜರನ್ನು ಸ್ಮರಿಸಿ ಗೌರವ ಸಲ್ಲಿಸಿದ್ದಾರೆ. ಇದು ಒಂದು ಜೈನ ಸಮಾಜಕ್ಕೆ ಹೆಮ್ಮೆ ತಂದಿದೆ ಎಂದು ಚಾರುಕೀರ್ತಿ ಮಹಾರಾಜರು ಉಭಯ ಶಾಸಕರ ಸೇವೆ ಕೊಂಡಡಿ ಇನ್ ಮುಂದೆ ಲಕ್ಷ್ಮಣ್ ಸವದಿ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಲಿ ಎಂದು ಶುಭ ಹಾರೈಸಿದರು.

ರಾಜ್ಯದ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ್ ಸವದಿ ಮಾತನಾಡಿ, ಜೈನ ಸಮಾಜ ಅಹಿಂಸಾವಾದಿ ಸಮಾಜ. ಕಾಂಗ್ರೆಸ್ ಪಕ್ಷದ ಅಧಿನಾಯಕಿ ಇಂದಿರ ಗಾಂಧೀಜಿ ಇವರು ತಮ್ಮ ಪಕ್ಷಕ್ಕೆ ಸಂಕಟ ಬಂದಾಗ ಸ್ವಾಮೀಜಿಯವರ ದರ್ಶನ ಪಡೆದು ಆಶೀರ್ವಾದ ಪಡೆದುಕೊಳ್ಳುತ್ತಿರುವಾಗ ಹಸ್ತ ಚಿನ್ನ ಕೊಡಗೆಯಾಗಿ ನೀಡಿದರು ಇದನ್ನು ಬಳಿಸಿ ಪಕ್ಷ ದೇಶ ಸೇವೆ ಮಾಡಿದ್ದೆ.
ಇಂತಹ ಸಮಾಜದ ಸೇವೆ ದೇಶಕ್ಕೆ ಒಂದು ಕೊಡುಗೆ ಇದೆ. ಇದರ ಬಗ್ಗೆ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದಾಗ ಅನೇಕ ಶಾಸಕರಿಗೆ ಕಾಂಗ್ರೆಸ್ ಪಕ್ಷದ ಹಸ್ತ ಚಿನ್ನ ಜೈನರ ಕೊಡುಗೆ ಇದು ಗೊತ್ತೇ ಇರಲಿಲ್ಲ. ಜೈನ ಸಮಾಜಕ್ಕೆ ಅಲ್ಪ ಸ್ವಲ್ಪ ಉಪಕಾರ ಮಾಡಲು ಸಮಾಜದ ವಿದ್ಯಾರ್ಥಿಗಳು ಸಾತ್ವಿಕ, ಸಸ್ಯಹಾರಿ ಆಗಿದ್ದರಿಂದ ಈ ವಿದ್ಯಾರ್ಥಿಗಳಿಗಾಗಿ ಸ್ವತಂತ್ರವಾದ ಸರ್ಕಾರಿ ಹಾಸ್ಟೆಲ್ ವ್ಯವಸ್ಥೆ ಮಾಡುವ ನಿರ್ಣಯ ಕೈಗೊಂಡಿದ್ದೇವೆ ಎಂದು ಹೇಳಿದರು.

ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗಿ ಮಾತನಾಡಿ, ಶೇಡಬಾಳ ಗ್ರಾಮದಲ್ಲಿ ರಾಷ್ಟ್ರಸಂತ ವಿದ್ಯಾನಂದ ಮುನಿಮಹಾರಾಜರು, ಹಿರಿಯ ಸಾಹಿತಿ ಮಿರ್ಜಿ ಅನಾರಾಯರು, ಖ್ಯಾತ ವೆಂಗ ಚಿತ್ರಕಾರರಾದ ಡಿ.ಜಿ ಕುಲಕರ್ಣಿ, ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯ ಮುಖ್ಯ ಆಯುಕ್ತರಾಗಿ ಸೇವೆ ಸಲ್ಲಿಸಿದ ಸಿ.ಎ.ಜಮಖಂಡಿಮಠ ಸಾಹೇಬರು, ಇಂತಹ ಮಹಾನ್ ವ್ಯಕ್ತಿಗಳು ಈ ಗ್ರಾಮದ ಸುಪುತ್ರರು. ಮಹಾರಾಜರ ಜೊತೆ ನಮ್ಮ ತಂದೆ ಹಾಗೂ ನಂದು ಒಡನಾಟ ಇತ್ತು ಎಂದು ಸ್ಮರಿಸಿ ಅವರ ಹೆಸರು ಅಜರಾಮರಾಗಿ ಉಳಿಸಿಕೊಳ್ಳಲು ಶೇಡಬಾಳ ರೈಲು ನಿಲ್ದಾಣಕ್ಕೆ ವಿದ್ಯಾನಂದ ರೈಲು ನಿಲ್ದಾಣ ಎಂಬ ನಾಮಕರಣ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ವಿಜಯಪುರ ಜ್ಞಾನಯೋಗ ಆಶ್ರಮದ ಜ್ಞಾನಾನಂದ ಸ್ವಾಮೀಜಿ ಇವರು ವಿದ್ಯಾನಂದ ಮುನಿ ಮಹಾರಾಜರ ಬಾಲ್ಯದಿಂದ ಸಮಾಧಿವರೆಗಿನ ವಿಸ್ತೃತವಾದ ಮಾಹಿತಿಯನ್ನು ನೀಡಿ ಮಹಾರಾಜರು ವಿಶ್ವಕ್ಕೆ ನೀಡಿರುವ ಕೊಡುಗೆ ಬಗ್ಗೆ ಹೇಳಿದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಜೈನ ಅಸೋಸಿಯೇಷನ್ ಉಪಾಧ್ಯಕ್ಷ ಶಿತಲಗೌಡ ಪಾಟೀಲ, ಸಂಸ್ಥೆಯ ಅಧ್ಯಕ್ಷರು ಹಾಗೂ ಕಾರ್ಯಕ್ರಮದ ಸಂಯೋಜಕರಾದ ಪ್ರಕಾಶ್ ನಾಂದ್ರೆ, ಡಾಕ್ಟರ್ ಅಶೋಕ್ ಪಾಟೀಲ್, ಡಾಕ್ಟರ್ ಮಹಾದವಲ ಭೂಮಾಜ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಉತ್ಕರ್ಷ ಪಾಟೀಲ, ಹಿರಿಯ ಸಾಹಿತಿ ಬಾಹುಬಲಿ ಬೊಸಗೆ, ರವೀಂದ್ರ ನರಸಾಯಿ, ಸೇರಿದಂತೆ ವಿದ್ಯಾನಂದ ಮುನಿ ಮಹಾರಾಜರ ಜೈನ ಹಾಗೂ ಜೈನೆತರ ಭಕ್ತರು ಪಾಲ್ಗೊಂಡಿದ್ದರು.
ಜೈನ ಸಮಾಜದ ಶಾಸ್ತ್ರಿಗಳಾದ ಡಾಕ್ಟರ್ ರಾಜೇಂದ್ರ ಸಾಂಗಾವೆ, ಗುರುಮಾತೆ ಅರ್ಚನಾ ಪಾಟೀಲ್ ನಿರೂಪಿಸಿದರು.

Tags:

error: Content is protected !!