Uncategorized

ಬೆಳಗಾವಿ : ವಿವಿಧ ಸಂಘಟನೆಗಳಿಂದ ಆಪರೇಷನ್ ಸಿಂಧೂರ್ ಬೆಂಬಲಿಸಿ ತಿರಂಗಾ ರ್ಯಾಲಿ

Share

ಆಪರೇಷನ್ ಸಿಂಧೂರ ಬೆಂಬಲಿಸಿ ಸೋಮವಾರ ಬೆಳಗಾವಿಯಲ್ಲಿ ವಿವಿಧ ಸಂಘಟನೆಗಳು ಹಾಗೂ ಪಕ್ಷಾತೀತವಾಗಿ ತಿರಂಗಾ ಯಾತ್ರೆ ನಡೆಸಲಾಯಿತು.

ಬೆಳಗಾವಿ ನಗರದ ಬಿ. ಆರ್ ಅಂಬೇಡ್ಕರ್ ಉದ್ಯಾನವನದಿಂದ ರ್ಯಾಲಿ ಆರಂಭಗೊಂಡಿತು. ಭಾರತ ಮಾತಾ ಕೀ ಜೈ ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಯೋಧರಿಗೆ ಧೈರ್ಯ ತುಂಬಲು ನಾವು ಇದ್ದೇವೆ ಎಂಬ ಸಂದೇಶ ನೀಡಲಾಯಿತು. ವಿವಿಧ ಸಂಘ-ಸಂಸ್ಥೆಗಳು ಸಾರ್ವಜನಿಕರು, ರಾಜಕೀಯ ಪಕ್ಷಗಳ ಮುಖಂಡರು, ಕಾರ್ಮಿಕರು ,ರೈತರು, ವಿದ್ಯಾರ್ಥಿಗಳು, ವಕೀಲರು, ಮಹಿಳೆಯರು ಯುವಕರು ಯುವತಿಯರು ಸೇರಿದಂತೆ ಎಲ್ಲಾ ದೇಶಾಭಿಮಾನಿ ನಾಗರಿಕರು ತ್ರಿವರ್ಣ ಧ್ವಜಗಳನ್ನು ಹಿಡಿದು ಸಾಲಾಗಿ ಶಿಸ್ತಿನಿಂದ ರಾಷ್ಟ್ರಾಭಿಮಾನದ ಘೋಷಣೆಗಳನ್ನು ಕೂಗುತ್ತಾ ಸಾಗಿದರು.
ರ್ಯಾಲಿಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಸಂಜಯ ಪಾಟೀಲ್ ಮಾತನಾಡಿ, ದೇಶ ಕಾಯುವ ಸೈನಿಕರಲ್ಲಿ ಧೈರ್ಯ ಹುಮ್ಮಸ್ಸು ತುಂಬುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ನಾವು ಬೇರೆ ಬೇರೆ ಜಾತಿ ಧರ್ಮದವರಾಗಿದ್ದರೂ ದೇಶದ ಪ್ರಶ್ನೆ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಭಾರತೀಯರಲ್ಲಿ ದೇಶಭಕ್ತಿಯನ್ನು ತುಂಬುವ ಇದೊಂದು ಅಪರೂಪದ ಕಾರ್ಯಕ್ರಮ ವಾಗಿದ್ದು, ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ಭಾರತ ಸರಿಯಾದ ಉತ್ತರ ಕೊಟ್ಟಿದೆ ನಾವೆಲ್ಲರೂ ನಮ್ಮ ನಮ್ಮ ಜಾತಿ ಧರ್ಮಗಳನ್ನು ಬಿಟ್ಟು ದೇಶಪ್ರೇಮವನ್ನು ಮೂಡಿಸಿಕೊಂಡರೆ ದೇಶಕ್ಕೆ ಒಳಿತಾಗುವುದು ಎಂದರು

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಉಗ್ರಗಾಮಿಗಳ ವಿರುದ್ಧ ನಮ್ಮ ಸೈನಿಕರು ಯಶಸ್ವಿ ಕಾರ್ಯಾಚರಣೆ ಮಾಡಿದ್ದಾರೆ. ಅವರ ಕಾರ್ಯವನ್ನು ಬೆಂಬಲಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಸಂಘ ಸಂಸ್ಥೆಗಳು ಎಲ್ಲ ಸಮಾಜದವ್ರು ಸೇರಿ. ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ಎಂಬ ಘೋಷವಾಕ್ಯದಡಿ ಎಲ್ಲ ನಾಗರಿಕರು ಸೇರಿ ಇವತ್ತು ತಿರಂಗ ಯಾತ್ರೆಯನ್ನು ಮಾಡುತ್ತಿದ್ದೇನೆ. ಭಾರತೀಯರಲ್ಲಿ ದೇಶಪ್ರೇಮದ ಕೆಚ್ಚು ಮೂಡಿಸಲು ಇದು ಪೂರಕವಾಗಿದೆ ಎಂದರು.

ವಿವಿಧ ಮಠಾಧೀಶರು,ಮಾಜಿ ಶಾಸಕ ಡಾ. ವಿಶ್ವನಾಥ್ ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ, ಮಾಜಿ ಶಾಸಕ ಅನಿಲ್ ಬೆಣಕೆ, ರವಿ ಪಾಟೀಲ್, ಉಜ್ವಲಾ ಬಡವನಾಚೆ, ಗೀತಾ ಸುತಾರ್, ಮುರುಗೇಂದ್ರ ಗೌಡ ಪಾಟೀಲ್ ಸೇರಿದಂತೆ ಅನೇಕ ಮುಖಂಡರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಚನ್ನಮ್ಮ ವೃತ್ತದ ಮೂಲಕ ಸಾಗಿದ ರ್ಯಾಲಿ ಶಹಪುರದ ಶಿವಾಜಿ ಉದ್ಯಾನದಲ್ಲಿ ಮುಕ್ತಾಯಗೊಂಡಿತು.

Tags:

error: Content is protected !!