BELAGAVI

ಪ್ರತಿ 12 ವರ್ಷಕ್ಕೊಮ್ಮೆ ಯಲ್ಲಮ್ಮನ ಗುಡ್ಡಕ್ಕೆ ಹೋಗಿ ಬರುವ ರೇಣುಕೆಯ ಮೂರ್ತಿ….

Share

12 ವರ್ಷದ ಬಳಿಕ ಬೆಳಗಾವಿಯ ಪಾಂಗುಳ ಗಲ್ಲಿ ದೇವಸ್ಥಾನದ ಶ್ರೀ ರೇಣುಕಾ ಯಲ್ಲಮ್ಮನ ಮೂರ್ತಿ ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ಹೋಗಿ ಪೂಜೆ ಸಲ್ಲಿಸಿ ಮರಳಿ ಬಂದಿದ್ದು, ಮೆರವಣಿಗೆಯ ಮೂಲಕ ಅದ್ಧೂರಿ ಸ್ವಾಗತವನ್ನು ಮಾಡಲಾಯಿತು.

ಬೆಳಗಾವಿ ಪಾಂಗುಳ ಗಲ್ಲಿಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಲ್ಲಿರುವ ಶ್ರೀ ರೇಣುಕಾ ದೇವಿಯ ಮೂರ್ತಿ ಪ್ರತಿ 12 ವರ್ಷಕ್ಕೊಮ್ಮೆ ಸವದತ್ತಿ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಲಾಗುತ್ತದೆ. ಈ ಬಾರಿ ಶನಿವಾರ ದೇವಸ್ಥಾನಕ್ಕೆ ಹೋಗಿ ಅಲ್ಲಿ ಶಾಸ್ತ್ರೋಕ್ತವಾಗಿ ಅಭಿಷೇಕ ಪೂಜೆಯನ್ನು ಮಾಡಿದರು. ಎರಡು ದಿನಗಳ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ನಂತರ, ಇಂದು ಬೆಳಿಗ್ಗೆ, ಬೆಳಗಾವಿ ಕೋಟೆಯಿಂದ ಕಾಮತ್ ಗಲ್ಲಿ, ಟೆಂಗಿನ್ ಕೇರಾ ಗಲ್ಲಿ ಮಾರ್ಗವಾಗಿ ಪಾಂಗುಳ ಗಲ್ಲಿಗೆ ಮೆರವಣಿಗೆಯ ಮೂಲಕ ತರಲಾಯಿತು.
ಏಪ್ರಿಲ್ 30 ರಂದು ಅಕ್ಷಯ ತೃತೀಯಾ ಸಂದರ್ಭದಲ್ಲಿ, ರೇಣುಕಾ ದೇವಿಯ ಪೂಜೆಯನ್ನು ಅದ್ಧೂರಿಯಾಗಿ ನೆರವೇರಿಸಲಾಗುವುದು. ಈ ಸಂದರ್ಭದಲ್ಲಿ, ದೇವದಾದಾ ಅವರ ಶಿಷ್ಯ ಕಿಸನ್ ಮುತಕೇಕರ್, ಮಧು ಮಾಯಿ ದತ್ತಾ ಕಾವಳೆ, ಪ್ರದೀಪ್ ಕಾವಳೆ, ಕಿರಣ್ ಕಾವಳೆ, ವಿನಾಯಕ ಕಾವಳೆ ಸೇರಿದಂತೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ದೇವಿಗೆ ಭಂಡಾರವನ್ನು ಉಗ್ಗು ಜಯಘೋಷ ಮಾಡಿದರು.

Tags:

error: Content is protected !!