ಬಿಜೆಪಿಯ ಪಾಕ್ ಪ್ರೇಮವನ್ನು ದೇಶದ ಜನರು ನೆನಪಿಸಿಕೊಳ್ಳಬೇಕು. ಉಗ್ರರ ದಾಳಿಗೆ ನಿರುತ್ತರವಾದ ಬಿಜೆಪಿ. ಸಿಎಂ ಸಮಾವೇಶದಲ್ಲಿ 4-5 ಕಾರ್ಯಕರ್ತರನ್ನು ಕಳುಹಿಸಿ ಪ್ರತಿಭಟಿಸಿ, ಸುರಕ್ಷತೆ ವೈಫಲ್ಯವನ್ನು ಮರೆ ಮಾಚಲು ಸಾಧ್ಯವಿಲ್ಲವೆಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್’ಸಿಂಗ್ ಸುರ್ಜೆವಾಲಾ ಹೇಳಿದರು.

ಇಂದು ಬೆಳಗಾವಿಯಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೂ ಉಗ್ರರಿಗೂ ನಂಟಿದೆಯೇ? ಕೇಂದ್ರದಲ್ಲಿ ಬಿಜೆಪಿಯ ಸರ್ಕಾರವಿರುವಾಗಲಷ್ಟೇ ಯಾಕೆ ದೇಶದಲ್ಲಿ ಉಗ್ರರ ದಾಳಿಗಳಾಗುತ್ತವೆ? ಎಂಬ ಪ್ರಶ್ನೆ ಜನರಲ್ಲಿ ಮೂಡ ತೊಡಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಸಂಸತ್ತಿನ ಮೇಲೂ ದಾಳಿಯಾಗಿರುವುದನ್ನು ನೆನಪಿಸಿಕೊಳ್ಳಬೇಕು. ಮೋದಿ ಪಿಎಂ ಆಗಿದ್ದಾಗಲೇ. ಪಟಾನ್’ಕೋಟ್, ಉರಿ, ನಗರೋಟಾ, ಅಮರನಾಥ್ ಯಾತ್ರೆ, ಪುಲ್ವಾಮಾ ಹಲ್ಲೆ ಘಟನೆಗಳು ನಡೆದವು. ಆದರೇ ಕೇಂದ್ರ ಸರ್ಕಾರ ನಿದ್ದೆಯಲ್ಲಿದೆ. ಈಗ ಪೆಹಲ್’ಗಾಮ್’ನಲ್ಲಿ ಉಗ್ರರ ದಾಳಿ ನಡೆದಿದ್ದು ಕರ್ನಾಟಕದ ಪ್ರವಾಸಿಗರ ಹತ್ಯೆಯಾಗಿದೆ. ಬಿಜೆಪಿಯ ಪಾಕ್ ಪ್ರೇಮವನ್ನು ದೇಶದ ಜನರು ನೆನಪಿಸಿಕೊಳ್ಳಬೇಕು. ದೇಶದ ಇತಿಹಾಸದಲ್ಲೇ ಮೋದಿ ಇಂತಹ ಓರ್ವ ಪಿಎಂ ಆಗಿದ್ದಾರೆ. ಆಮಂತ್ರಣವಿಲ್ಲದೇ, ಪಾಕಿಸ್ತಾನದ ಆತಿಥ್ಯಕ್ಕೆ ಹೋಗಿದ್ದರು. ಇದರ ಉಡುಗೊರೆಯಾಗಿ ಪಾಕಿಸ್ತಾನ ಪಟಾನ್’ಕೋಟ್ ಹಲ್ಲೆಯನ್ನು ನಡೆಸಿತ್ತು.

ಬಿಜೆಪಿಯ ಸಕ್ಸೆನಾ, ಬಜರಂಗದಳದ ಬಲರಾಮ್ ಸಿಂಗ್, ಪ್ರದೀಪ್ ಉರುಲಕರ ಐಎಸ್’ಐಗೆ ಕೆಲಸ ಮಾಡುವಾಗ ಸಿಕ್ಕಿ ಹಾಕಿಕೊಂಡಿದ್ದರು. ಕಾಶ್ಮೀರದಲ್ಲಿ ಬಿಜೆಪಿಯ ಬೇಟಿ ಬಚಾವ್’ನ ಪ್ರಮುಖಳಾದ ಆಸೀಫಾ ಅಂದ್ರಾ , ಪಾಕಿಸ್ತಾನದ ಮೌಲಾನಾ ಮಸೂದ್ ಅಝರ್’ನೊಂದಿಗೆ ದೇಶದ ವಿರುದ್ಧ ವಾಗ್ಧಾಳಿ ನಡೆಸಿದ್ದಳು. ಇವರ ನಂಟು ಬಿಜೆಪಿ ಮತ್ತು ಆರ್.ಎಸ್.ಎಸ್. ನೊಂದಿಗಿಲ್ಲವೇ ಎಂದು ಅವರು ಜೆಪಿ ನಡ್ಡಾ ಹಾಗೂ ವಿಜಯೇಂದ್ರ ಅವರನ್ನು ಪ್ರಶ್ನಿಸಿದರು.
ಆತಂಕವಾದಿಗಳ ವಿರುದ್ಧ ಕೈಗೊಳ್ಳುವ ಕ್ರಮಗಳಿಗೆ ಕಾಂಗ್ರೆಸನ ಸಂಪೂರ್ಣ ಬೆಂಬಲವಿದೆ. ಬೈಸರನ್ ಮೈದಾನ ವರ್ಷವಿಡಿ ಪ್ರವಾಸಿಗರಿಗೆ ಮುಕ್ತವಾಗಿವುದಾದರೇ, ಸುರಕ್ಷತೆ ಯಾಕೆ ನೀಡಿಲ್ಲ.? ಪೆಹಲ್’ಗಾಮ್’ನಲ್ಲಿ ಮೂರು ಪ್ರಕಾರದ ಸುರಕ್ಷತೆ ಇರಬೇಕಾದರೇ ಉಗ್ರರು ನುಸುಳಿ ಬಂದು ಹಲ್ಲೆ ಮಾಡಿದ್ದು ಹೇಗೆ? 21 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ಗುಜರಾತನಲ್ಲಿ ಜಪ್ತಿ ಮಾಡಲಾಗಿದ್ದು, ಅವುಗಳನ್ನು ಪೆಹಲ್’ಗಾಮ್ ಫೋರ್ಟ್’ನಿಂದಲೇ ತೆಗೆದುಕೊಂಡು ಬರಲಾಗಿದೆ. ಬಿಜೆಪಿ ಸರ್ಕಾರದ ಇದರ ಉತ್ತರ ನೀಡಬೇಕು. 4-5 ಜನರನ್ನು ಬಿಜೆಪಿಗರು ಕಳುಹಿಸಿ, ಕರ್ನಾಟಕದ ಸಿಎಂ ಸಮಾವೇಶದಲ್ಲಿ ಘೋಷಣೆ ಕೂಗಲೂ ಹೇಳಿ ಇದರಿಂದ ನುಸುಳಿಕೊಳ್ಳಲು ಬರುವುದಿಲ್ಲ ಎಂದರು.