ಹಳೇ ವೈಷಮ್ಯದ ಹಿನ್ನಲೆಯಲ್ಲಿ ರೌಡಿಶೀಟರ್ ಮಲ್ಲಿಕ್ ಚಾಕು ಹಾಕಿದ ಘಟನೆ ಹುಬ್ಬಳ್ಳಿಯ ನಗರದ ವೀರಾಪೂರ ಓಣಿ ರಸ್ತೆಯ ಮಠಪತಿಗಳ್ಳಿಯಲ್ಲಿ ನಡೆದಿದೆ.
ರೌಡಿಶೀಟರ್ ಜಿದ್ದಿ ಮಲ್ಲಿಕ್ ಗೆ ಎಂಬ ಮತ್ತೊಬ್ಬ ರೌಡಿ ಜಮೀರ್ ಅಲಿಯಾಸ್ ಜಮ್ಮು ಅನ್ನೋ ವ್ಯಕ್ತಿ ಚಾಕು ಚಾಕುವಿನಿಂದ ಇರಿದಿದ್ದಾನೆ. ಕೆಲ ದಿನಗಳ ಹಿಂದೆಯೂ ಕ್ಷುಲಕ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದು ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ನಿನ್ನೆ ರಾತ್ರಿ ಅದೇ ವಿಚಾರಕ್ಕೆ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ಗಾಯಗೊಂಡ ರೌಡಿಶೀಟರ್ ಮಲ್ಲಿಕ್ ಗೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ . ಘಟನೆ ನಡೆದ ಸ್ಥಳಕ್ಕೆ ಡಿಸಿಪಿ ನಂದಗಾವಿ ಅವರು ಭೇಟಿನೀಡಿ ಪರಿಶೀಲನೆ ಮಾಡಿದರು. ಈ ಕುರಿತು ಗಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
