ಚಿಕ್ಕೋಡಿ: ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ಚಿಕ್ಕೋಡಿಯಿಂದ ಉಮರಾಣಿ ರಸ್ತೆಯ ಮಾರ್ಗವಾಗಿ ನಾಗರಮುನ್ನೋಳಿ ರಸ್ತೆಗೆ ಕೂಡುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗ್ರಾಮದ ಗ್ರಾ.ಪಂ ಸದಸ್ಯರು,ಮುಖಂಡರ ಸಮ್ಮುಖದಲ್ಲಿ ಚಾಲನೆಯನ್ನು ನೀಡಲಾಯಿತು.

ಶಾಸಕ ಗಣೇಶ ಹುಕ್ಕೇರಿ, ಎಂಎಲ್ಸಿ ಪ್ರಕಾಶ ಹುಕ್ಕೇರಿಯವರ ಪ್ರಯತ್ನದಿಂದ ಸುಮಾರು ೧ ಕೋಟಿ ರೂಪಾಯಿ ವೆಚ್ಚ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆಯನ್ನು ನೀಡಲಾಯಿತು.

ಬಳಿಕ ಗಣ್ಯರು ಮಾಧ್ಯಮಗಳ ಜೊತೆಗೆ ಮಾತನಾಡಿ ಅಭಿವೃದ್ಧಿ ಹರಿಕಾರರಾದ ಶಾಸಕ ಗಣೇಶ ಹುಕ್ಕೇರಿ, ಎಂಎಲ್ಸಿ ಪ್ರಕಾಶ ಹುಕ್ಕೇರಿಯವರ ಪ್ರಯತ್ನದಿಂದ ಬಹುದಿನಗಳ ಬೇಡಿಕೆಯಾದ ಉಮರಾಣಿ,ನಾಗರಮುನ್ನೋಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇವತ್ತು ಚಾಲನೆಯನ್ನು ನೀಡಲಾಗಿದೆ.ಈ ಹಿನ್ನೆಲೆಯಲ್ಲಿ ಗಣೇಶ ಹುಕ್ಕೇರಿ,ಪ್ರಕಾಶ ಹುಕ್ಕೇರಿಯವರಿಗೆ ನಮ್ಮ ಜೋಡಕುರಳಿ ಗ್ರಾಮಸ್ಥರ ಪರವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದರು.
ಈ ಸಂಧರ್ಭದಲ್ಲಿ ಬಸಗೌಡ ಪಾಟೀಲ,ದೀಪಕ ಕಾಂಬಳೆ,ಅಜೀತ ಸವದತ್ತಿ, ಬಾಳು ಗಡಕರಿ,ಕೃಷ್ಣಪ್ಪ ಕಾಂಬಳೆ,ಮುರಾರಿ ನಾಗನೂರೆ,ಚಂದರ ಗಡಕರಿ,ರಾಯಪ್ಪ ಹರಕೆ,ಲಕ್ಷ್ಮಣ ಪಾಟೀಲ, ಭರಮಾ ಕಾಂಬಳೆ,ಗುತ್ತಿಗೆದಾರ ವಸಂತ ಅವರಾದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.