ಸಿಡಿಲು ಬಡಿದು ವ್ಯಕ್ತಿ ಹಾಗೂ ಎಮ್ಮೆ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದಿದೆ.

ಬಳಗಾನೂರು ಗ್ರಾಮದ ಅಯ್ಯಪ್ಪ ಸಜ್ಜನ್ ಮೃತ ದುರ್ದೈವಿಯಾಗಿದ್ದು, ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮತ್ತೊಂದೆಡೆ ತಾಳಿಕೋಟೆ ಪಟ್ಟಣದ ಪಡೆಕನೂರು ಗ್ರಾಮದಲ್ಲಿ ರಾಮಗೌಡ ಬನಹಟ್ಟಿ ಎಂಬುವರಿಗೆ ಸೇರಿದ ಎಮ್ಮೆ ಸಾವನ್ನಪ್ಪಿದೆ. ಮನೆಯ ಹೊರಗಡೆ ಕಟ್ಟಿರುವ ಎಮ್ಮೆಗೆ ಸಿಡಲು ಬಡೆದು ಎಮ್ಮೆ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ.
