ಚಿಕ್ಕೋಡಿ:ರಾಯಬಾಗ ತಾಲೂಕಿನ ಅಳಗವಾಡಿ ಗ್ರಾ.ಪಂ ವ್ಯಾಪ್ತಿಯ ಮನೆಗಳ ಮಂಜೂರು ಮಾಡುವುದಕ್ಕೆ ಶಾಸಕ ಮಹೇಂದ್ರ ತಮ್ಮಣ್ಣನವರ ಆಪ್ತ ಸಹಾಯಕರು ತಲಾ 2 ಸಾವಿರ ಹಣ ಪಡೆದಿದ್ದಾರೆ ಎಂದು ಗ್ರಾಮ ಪಂಚಾಯತ ಸದಸ್ಯ ಸುನೀಲ ಕಾಂಬಳೆ ಆರೋಪಿಸಿದ್ದಾರೆ.

ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ೨೦೨೦-೨೧ ಸಾಲಿನಲ್ಲಿ ಮಾಜಿ ಶಾಸಕ ಪಿ ರಾಜೀವಯವರು ೩೪೯ ಮನೆಗಳನ್ನು ಅಳಗವಾಡಿ ಗ್ರಾಮ ಪಂಚಾಯತಗೆ ಮಂಜೂರು ಮಾಡಿದ್ದರು.ಆ ಸಂಧರ್ಭದಲ್ಲಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಮಾಡಲು ಆಗಲಿಲ್ಲ.ಆದ್ರೆ ಇತ್ತಿಚಿಗೆ ಶಾಸಕ ಮಹೇಂದ್ರ ತಮ್ಮಣ್ಣನವರು ಕೇವಲ ೯೧ ಮನೆಗಳ ಹಕ್ಕು ಪತ್ರಗಳನ್ನು ಹಂಚಿಕೆ ಮಾಡಿದರು.ಇನ್ನೂಳಿದ ಮನೆಗಳ ಹಕ್ಕುಪತ್ರಗಳನ್ನು ಹಣ ಕೊಟ್ಟಿಲ್ಲ ಎಂದು ಹಂಚಿಕೆ ಮಾಡಲಿಲ್ಲ. ಮನೆಗಳ ಹಕ್ಕು ಪತ್ರಗಳ ಬಗ್ಗೆ ಶಾಸಕ ಮಹೇಂದ್ರ ತಮ್ಮಣ್ಣನವರನ್ನು ಪ್ರಶ್ನಿಸಿದೆ.ಇದು ನನ್ನ ಗಮಕ್ಕೆಇಲ್ಲ ಎಂದು ಶಾಸಕರು ಹಾರೈಕೆಯ ಉತ್ತರವನ್ನು ನೀಡಿದರು.

ದಲಿತರಿಗೆ ಒಂದು ಮನೆಯು ಮಂಜೂರು ಮಾಡಿಲ್ಲ.ಶಾಸಕರು ದಲಿತರಿಗೆ ಅನ್ಯಾಯ ಮಾಡಿದ್ದಾರೆ.ಹಣ ಕೊಟ್ಟವರಿಗೆ ಮಾತ್ರ ಮನೆಗಳನ್ನು ಮಂಜೂರ ಮಾಡಲಾಗಿದೆ.ಇನ್ನೂಳಿದವರಿಗೆ ಮನೆಗಳನ್ನು ಮಂಜೂರು ಮಾಡಿಲ್ಲ.ನನ್ನ ಪ್ರಾಣಕ್ಕೆ ಏನಾದರೂ ಧಕ್ಕೆಯಾದರೆ ಅದಕ್ಕೆ ಶಾಸಕ ಮಹೇಂದ್ರ ತಮ್ಮಣ್ಣನವರ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಹಾಲ್ಗುಣಿಯವರು ನೇರ ಕಾರಣ ಎಂದರು.