BELAGAVI

ತೇರದಾಳದ ಡಾ. ವಿಶಾಲ ಹುಬ್ಬಳ್ಳಿ ನೀಟ್ ವಿಶೇಷ ಕೋರ್ಸ ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೆ ಎರಡನೇ ಟಾಪರ್

Share

ಭಾರತ ಸರ್ಕಾರದ ನೀಟ್ ಸೂಪರ್ ಸ್ಪೆಷಾಲಿಟಿ ಪ್ರವೇಶ ಪರೀಕ್ಷೆಯಲ್ಲಿ ಬಾಗಲಕೋಟೆ ಜಿಲ್ಲೆಯ ತೇರದಾಳದ ಡಾ. ವಿಶಾಲ ಹುಬ್ಬಳ್ಳಿ ಇಡೀ ದೇಶಕ್ಕೆ‌ ಎರಡನೇ ಟಾಪರ್ ಆಗಿ ಹೊರಹೊಮ್ಮಿ ಆ ಮೂಲಕ ಕರ್ನಾಟಕದ ಕೀರ್ತಿ ಹೆಚ್ಚಿಸಿದ್ದಾರೆ.

ಎಂಬಿಬಿಎಸ್, ಎಂಎಸ್ ನಂತರ ವೈದ್ಯಕೀಯ ವಿಶೇಷ ಕೋರ್ಸ್ಗೆ ಪ್ರವೇಶ ಪಡೆಯುವ ನಿಟ್ಟಿನಲ್ಲಿ ಡಾ. ವಿಶಾಲ್ ಹುಬ್ಬಳ್ಳಿ ಮೈಸೂರಲ್ಲಿ ಎಂಸಿಹೆಚ್ ವಿಭಾಗಕ್ಕೆ ನೀಟ್ ಪರೀಕ್ಷೆ ಬರೆದಿದ್ದರು. 2025 ಮಾರ್ಚ್ 30ರಂದು ಪರೀಕ್ಷೆ ನಡೆದಿತ್ತು. ನೀಟ್ ಸೂಪರ್ ಸ್ಪೆಷಾಲಿಟಿ ಪ್ರವೇಶ ಪರೀಕ್ಷೆಯಲ್ಲಿ ಜಿಲ್ಲೆಯ ತೇರದಾಳದ ಡಾ. ವಿಶಾಲ ಹುಬ್ಬಳ್ಳಿ ಎಂಬುವವರು ಇಡೀ ದೇಶಕ್ಕೆ‌ ಎರಡನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಆ ಮೂಲಕ ಕರ್ನಾಟಕದ ಕೀರ್ತಿ ಹೆಚ್ಚಿಸಿದ್ದಾರೆ. ವಿಶಾಲ್ ತಂದೆ ಶ್ರೀಶೈಲ್ ಹುಬ್ಬಳ್ಳಿ ಮತ್ತು ಗೀತಾ ಹುಬ್ಬಳ್ಳಿ ಇಬ್ಬರು ಕೂಡ ಬಿಎಎಂಎಸ್ ವೈದ್ಯರಾಗಿದ್ದು, ಇದೀಗ ಮಗನ ಸಾಧನೆ ಕಂಡು ಫುಲ್ ಖುಷ್ ಆಗಿದ್ದಾರೆ. ಪಿಯುಸಿ ಪಠ್ಯವನ್ನು ಗಂಭೀರವಾಗಿ ಓದಬೇಕು. ಅದರಲ್ಲಿನ ಬಹುತೇಕ ಪ್ರಶ್ನೆಗಳನ್ನು ನೀಟ್ನಲ್ಲಿ ಕೇಳಲಾಗುತ್ತದೆ. ಎಂಸಿಕ್ಯೂ (ಬಹು ಆಯ್ಕೆಯ ಪ್ರಶ್ನೆ) ಬಗ್ಗೆ ಹೆಚ್ಚು ಗಮನಹರಿಸಬೇಕು.

ಜೊತೆಗೆ ನೀಟ್ಗಾಗಿ ಅಭ್ಯಾಸ ಮಾಡುತ್ತಿರುವ ಸ್ನೇಹಿತರ ಜೊತೆ ಚರ್ಚೆ ಮಾಡ್ತಿರಬೇಕು. ಇದೆಲ್ಲಾ ನಿರಂತರವಾಗಿ ಇದ್ದರೆ ನೀಟ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಬಹುದು. ಕೋಚಿಂಗ್ ಹೋಗಬೇಕು ಅಂತೇನೂ ಇಲ್ಲ ಎಂದಿದ್ದಾರೆ. ತೇರದಾಳದಲ್ಲೇ ಸೇವೆ ಸಲ್ಲಿಸಲು ಇಚ್ಚೆ ವ್ಯಕ್ತಪಡಿಸಿದ ಡಾ ವಿಶಾಲ್, ಈಗಾಗಲೇ ನಮ್ಮ ತಂದೆ-ತಾಯಿ ತೇರದಾಳ ಪಟ್ಟಣದಲ್ಲಿ ಬಿಎಎಂಎಸ್ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಇನ್ ನ್ಯೂಸ್ ನೊಂದಿಗೆ ಮಾತನಾಡಿದ,ಡಾ. ವಿಶಾಲ್ ಹುಬ್ಬಳ್ಳಿ ಎಂಸಿಹೆಚ್ ಮೂಲಕ ಗ್ಯಾಸ್ಟೊ ಸರ್ಜರಿ ಮುಗಿಸಿ ಇಲ್ಲಿಯೇ ಜನರಿಗೆ ವೈದ್ಯಕೀಯ ಸೇವೆ ಮಾಡಬೇಕೆಂದಿದ್ದಾರೆ.

Tags:

error: Content is protected !!