Chikkodi

ಕಾಂಗ್ರೆಸ್‌ನಿಂದ ಅಂಬೇಡ್ಕರ್‌ಗೆ ಅವಮಾನ-ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

Share

ಚಿಕ್ಕೋಡಿ: ಕಾಂಗ್ರೆಸ್ ಪಕ್ಷದವರ ಬಾಬಾಸಾಹೇಬರಿಗೆ ಪದೇ ಪದೇ ಅಪಮಾನ ಮಾಡಿದ್ದಾರೆ. ಚುನಾವಣೆಯಲ್ಲಿ ಸೋಲಿಸಿದ್ದಾರೆ. ಅಂಬೇಡ್ಕರ್ ಜೀವಿತಾವಧಿಯಲ್ಲಿ ಭಾರತ ರತ್ನ ಪ್ರಶಸ್ತಿ ನೀಡದೆ ಅವಮಾನಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ನಿಪ್ಪಾಣಿ ಪಟ್ಟಣದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬಿಜೆಪಿಯಿಂದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ನಿಪ್ಪಾಣಿ ಭೇಟಿಯ ನೆನಪಿಗಾಗಿ ಆಯೋಜಿಸಿದ್ದ ಭೀಮ ಹೆಜ್ಜೆ ಶತಮಾನದ ಸಂಭ್ರಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪಕ್ಷ ಮಾಡಿದಷ್ಟು ಆವಮಾನವನ್ನು ಬೇರೆ ಯಾರೂ ಮಾಡಿಲ್ಲ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಕಾಂಗ್ರೆಸ್ ನಾಯಕರು ಅಂಬೇಡ್ಕರ್ ಹೆಸರನ್ನು ಚುನಾವಣೆಯಲ್ಲಿ ಬಳಸಿಕೊಳ್ಳುತ್ತಾರೆ. ಆದರೆ ನಂತರ ಅವರ ನೆನಪು ಇರುವುದಿಲ್ಲ ಎಂದರು‌.

ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿ,ಮುಸ್ಲಿಮರಿಗೆ ದಲಿತರ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷ ಜಾತಿ ಸಮೀಕ್ಷೆಯಲ್ಲಿ ಮುಸ್ಲಿಂಮರಿಗೆ ಮೊದಲ ಸ್ಥಾನ ನೀಡಿದ್ದೀರಿ. ಹಾಗಾದರೆ ದಲಿತರ ಕತೆ ಏನು? ದಲಿತ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದನ್ನು ದುರ್ಬಳಕೆ ಮಾಡಿಕೊಂಡ ಹಣ ಯಾವಾಗ ವಾಪಸ್‌ ಮಾಡುತ್ತೀರಿ? ಅಂಬೇಡ್ಕರ್ ಪ್ರತಿಮೆ ಎಲ್ಲಿ ನಿರ್ಮಿಸಿದ್ದೀರಿ? ಅಂಬೇಡ್ಕ‌ರ್ ಸಮಾಧಿಗೆ ಜಾಗ ಯಾಕೆ ಕೊಡಲಿಲ್ಲ? ಅಂಬೇಡ್ಕರ್ ಸೋಲಿಗೆ ಸಾರ್ವಕರ್ ಎಂದು ಹೇಳಿದ್ದಕ್ಕೆ ಸಾಕ್ಷಿ ಕೊಡಿ ಎಂದು ಸವಾಲು ಎಸೆದರು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲುವಾದಿ ನಾರಾಯಣಸ್ವಾಮಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರೀಯಾಂಕ ಖರ್ಗೆ ಮಾತು ಕೇಳಿ ಅಂಬೇಡ್ಕರ್ ಅವರನ್ನು ವೀರ ಸಾರ್ವಕರ್ ಸೋಲಿಸಿದ್ದಾರೆ ಎಂದು ಹೇಳಿದ್ದಾರೆ. ಅದನ್ನು ಸಾಬೀತು ಪಡಿಸಿದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಛಲುವಾದಿ ನಾರಾಯಣಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ಸವಾಲ್ ಹಾಕಿದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್ ಯಾವತ್ತು ದಲಿತರನ್ನು ಗೌರವಿಸಿಲ್ಲ. ದೇಶದ ಮೊದಲ ಚುನಾವಣೆಯಲ್ಲಿಯೇ ಡಾ. ಅಂಬೇಡ್ಕರ್ ಸೋಲಿಸಿದ್ದು, ಇದೇ ಕಾಂಗ್ರೆಸ್ ಎಂದರು.

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ಬಾಬಾಸಾಹೇಬ ಅಂಬೇಡ್ಕರ್ ಅವರಂತಹ ಮಹಾನ್ ವ್ಯಕ್ತಿ ನಿಪ್ಪಾಣಿಗೆ ಭೇಟಿ ನೀಡಿದ್ದು, ನಮ್ಮ ಪುಣ್ಯಭೂಮಿಯಲ್ಲಿ ಎಂದು ಹೆಮ್ಮೆ ಎಂದರು.ಅಂಬೇಡ್ಕರ್ ಯವರು ನಿಪ್ಪಾಣಿ ಭೇಟಿ ನೀಡಿದಾಗ,ಕುದುರೆ ಮೇಲಿಂದ ಗವಾನ ಬೆಟ್ಟಡ ಮೇಲೆ ವಾಯು ವಿಹಾರಕ್ಕೆ ಹೋಗುತ್ತಿದ್ದ ಸ್ಥಳದಲ್ಲೇ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದರು.

ಈ ಸಂಧರ್ಭದಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ನಗರ ಸಭೆ ಅಧ್ಯಕ್ಷೆ ಸೋನಲ್ ಕೊಠಡಿಯಾ, ಶಾಸಕ ನಿಖೀಲ ಕತ್ತಿ,ದುರ್ಯೋಧನ ಐಹೊಳೆ,ಅವಿನಾಶ ಜಾಧವ, ಚಂದ್ರು ಲಮಾಣಿ, ವಿ.ಪ ಸದಸ್ಯ ಹನುಮಂತ ನಿರಾಣಿ.ಮಾಜಿ ಸಂಸದರಾದ ಮಂಗಲಾ ಅಂಗಡಿ, ಮಾಜಿ ಶಾಸಕ ಎನ್ ಮಹೇಶ, ಪಿ.ರಾಜು. ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲ, ವಿವೇಕರಾವ ಪಾಟೀಲ, ಸಂಜಯ ಪಾಟೀಲ, ಡಾ. ವಿಶ್ವನಾಥ ಪಾಟೀಲ, ಮಹದೇವಪ್ಪ ಯಾದವಾಡ, ಉಮೇಶ ಜಾಧವ, ಮುನಿಸ್ವಾಮಿ, ಸತೀಶ ಅಪ್ಪಾಜಿಗೋಳ, ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೋಂಡ ಪಾಟೀಲ,ಬಸವಪ್ರಸಾದ ಜೊಲ್ಲೆ ಎನ.ರವಿಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!