State

ಕಾಂಗ್ರೆಸ್ ಎಂದರೇ ಸಾಬರ ಪಾರ್ಟಿ ಆಗಿಬಿಟ್ಟಿದೆ… ನಾಚಿಕೆಯಾಗಬೇಕು ಇವರ ಜನ್ಮಕ್ಕೆ…

Share

ಕಾಂಗ್ರೆಸ್ ಎಂದರೆ ಸಾಬರ ಪಾರ್ಟಿ ಆಗಿಬಿಟ್ಟಿದೆ. ಯುದ್ಧ ಮಾಡೋದು ಬಿಡೋದರ ಬಗ್ಗೆ ಪಿಎಂ ನಿರ್ಣಯ ಕೈಗೊಳ್ಳುತ್ತಾರೆ. ನಮ್ಮ ದೇಶದ ಸುರಕ್ಷಿತೆ ನರೇಂದ್ರ ಮೋದಿಯವರ ಕೈಯಲ್ಲಿದೆ. ಶೀಘ್ರವೇ ಪಾಕಿಸ್ತಾನಕ್ಕೆ ಪಾಠ ಕಲಿಸ್ತಾರೆ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.

ಕಲ್ಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯಗೆ ಮಾನ ಮಾರ್ಯಾದೆ ಏನಾದರೂ ಇದೆಯಾ? ನಿಮ್ಮ ಧರ್ಮ ಯಾವುದು ಅಂತ ಕೇಳಿ ಫೈರಿಂಗ್ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಹಿಂದೂಗಳು ವೋಟ್ ಹಾಕಿಲ್ವ? ಕೇವಲ ಸಾಬುರುಗಳೇ ವೋಟ್ ಹಾಕಿದ್ದಾರಾ? ಸಾಬರ ಎಂಜಲು ತಿನ್ನೊ ಪಾರ್ಟಿ ಕಾಂಗ್ರೆಸ್. ಕಾಂಗ್ರೆಸ್ ಎಂದರೆ ಸಾಬರ ಪಾರ್ಟಿ ಆಗಿಬಿಟ್ಟಿದೆ. ಪಾಕ್‌ಗೆ ನೀರು ಬಿಡೋದು ಬಿಟ್ಟು ಹೆಚ್ಚಾದರೆ ಏನ್ ಮಾಡ್ತೀರಾ ಅಂತಾ ಕೇಳ್ತಾರೆ. ನಾಚಿಕೆಯಾಗಬೇಕು ಇವರ ಜನ್ಮಕ್ಕೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.

ಇನ್ನಾದರೂ ನಮ್ಮ ಹಿಂದುಗಳು, ಸನಾತನರು ಒಂದಾಗಬೇಕು. ನಮ್ಮ ದೇಶದ ಸುರಕ್ಷಿತೆ ನರೇಂದ್ರ ಮೋದಿಯವರ ಕೈಯಲ್ಲಿದೆ. ಶೀಘ್ರವೇ ಪಾಕಿಸ್ತಾನಕ್ಕೆ ಪಾಠ ಕಲಿಸ್ತಾರೆ. ಓವೈಸಿಕ್ಕಿಂತ ಖತರ್ನಾಕ್ ನಮ್ಮ ಕೆಲ ಹಿಂದುಗಳಿದಾರೆ. ಒವೈಸಿ ಅವರದ್ದೆ ಏಜೆಂಟ್ ಇದಾನೆ. ಆದರೆ ಒವೈಸಿಗೆ ಹುಟ್ಟಿದ ಕೆಲ ಹಿಂದುಗಳು ನಮ್ಮಲ್ಲಿದ್ದಾರೆ. ನಮ್ಮಲ್ಲಿರೋ ಕೆಲ ತಾಯಿಗಂಡರು ಪಾಕ್‌ಗೆ ಸಪೋರ್ಟ್ ಮಾಡುವವರಿದ್ದಾರೆ ಎಂದರು.

ಕಾಂಗ್ರೆಸ್‌ನ ಅಯೋಗ್ಯರು ಮಾತನಾಡೋದು ನೋಡಿದ್ರೆ ಪಾಕಿಸ್ತಾನದ ಪರ ಮಾತಾಡ್ತಾರೆ. ಯುದ್ಧ ಬೇಕು ಬೇಡ ಅನ್ನೊದು ಸಿದ್ದರಾಮಯ್ಯಗೆ ಸಂಬಂಧವಿಲ್ಲ, ಸಿದ್ದರಾಮಯ್ಯ ಕರ್ನಾಟಕ ಸಿಎಂ ಅಷ್ಟೇ. ಯುದ್ಧದ ಬಗ್ಗೆ ನಿರ್ಣಯ ತೆಗೆದುಕೊಳ್ಳೋದು ಕೇಂದ್ರ ಸರ್ಕಾರ ಹಾಗೂ ಸೇನೆ. ರಾಜ್ಯದಲ್ಲಿ ಹಿಂದುಗಳ ಮೇಲೆ ದಲಿತರ ಮೇಲಿನ ಅತ್ಯಾಚಾರ ದೌರ್ಜನ್ಯ ತಡೆಗಟ್ಟಲಿ. ಮಹಾನ್ ದಲಿತ ನಾಯಕ ಪ್ರಿಯಾಂಕ್ ಖರ್ಗೆ ಎಲ್ಲಿದಾನೆ? ಧರ್ಮ ಕೇಳಿ ಹೊಡೆದಿಲ್ಲ ಅಂತಾ ಪ್ರಿಯಾಂಕ್ ಖರ್ಗೆ ಹೇಳ್ತಾನೆ. ಇವನಿಗೆನೂ ಪ್ರಬುದ್ಧತೆ/ಮ್ಯಾಚೂರಿಟಿ ಬಂದಿದೆಯೋ ಇಲ್ವೋ? ಎಂದು ಕಿಡಿಕಾರಿದ್ದಾರೆ.

Tags:

error: Content is protected !!