hubbali

ನಾನು ಹಿಂದೂ ಪರವಾಗಿ ಮಾತಾಡ್ತಾ ಇದ್ದೇವೆ ಅದಕ್ಕೆ ಕೆಲವರಿಗೆ ಕಸಿ ಬಿಸಿ ಆಗ್ತಿದೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

Share

ಹುಬ್ಬಳ್ಳಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಿಜಾಪುರದಲ್ಲಿ ಪ್ರತಿಭಟನೆ ವಿಚಾರ. ಕರ್ನಾಟಕದಲ್ಲಿ ನಾವು ಹಿಂದೂ ಪರವಾಗಿ ಮಾತಾಡ್ತಾ ಇದ್ದೇವೆ ನಾವು ದೇಶದ್ರೋಹಿಗಳ ವಿರುದ್ಧ ಮಾತನಾಡುತ್ತಿರುವುದಕ್ಕೆ ಕಸಿ ಬಿಸಿ ಆಗ್ತಿದೆ ಹಿಂದೂಗಳಲ್ಲಿಯೂ ಕೆಲವು ತಾ. ಗಂಡರು, ಯತ್ನಾಳ್ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ತಾ. ಗಂಡರು, ಯತ್ನಾಳನ್ನ ಏನು ಒದ್ದು ಒಳ ಹಾಕ್ತಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ್ದಕ್ಕೆ ಈಗಾಗಲೇ ಹೈಕೋರ್ಟ್ ಸ್ಟೇ ಕೊಟ್ಟಿದೆ. ಯತ್ನಾಳನ್ನ ಒದ್ದು ಒಳ ಹಾಕೋಕೆ ಯಾರಿಗೂ ತಾಕತ್ ಇಲ್ಲಾ ಎಂದರು. ಕಾಂಗ್ರೆಸ್ ಹಿಂದೂಗಳ ಪಕ್ಷ ಅಲ್ಲಾ, ಯಾವತ್ತಾದ್ರೂ ಹಿಂದೂಗಳ ಪರವಾಗಿ ಮಾತನಾಡಿದ್ದಾರಾ. ನೆಹರು ಪ್ರಧಾನ ಮಂತ್ರಿ ಮಾಡೋಕೆ ಗಾಂಧೀ ಪಾಕಿಸ್ತಾನ್ ಒಡೆದ.

ಭಾರತದಿಂದ ಮುಸ್ಲಿಂ ಹೋಗಬೇಡಿ ಅಂದಿದ್ದೆ ಗಾಂಧೀ ಮಾಡಿದ ತಪ್ಪು. ಅಂಬೇಡ್ಕರ್ ಹೇಳಿದ್ರು ಮುಸ್ಲಿಂ ಪಾಕಿಸ್ತಾನ್ ಕ್ಕೆ ಹೋಗಬೇಕು, ಅಲ್ಲಿನ ಹಿಂದೂ ಭಾರತಕ್ಕೆ ಬರಬೇಕು. ಎಲ್ಲಿಯವರೆಗೆ ಭಾರತದಲ್ಲಿ ಮುಸ್ಲಿಂರು ಇರ್ತಾರೆ ಶಾಂತಿ ನೆಮ್ಮದಿ ಇರೋದಿಲ್ಲ ಈ ರೀತಿ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ ಮಾತು ಎಂದರು. ಕೋಮು ಭಾವನೆ ದೇಶದಲ್ಲಿರೋದಕ್ಕೆ ಕಾರಣವೇ ನೆಹರು ಹಾಗೂ ಗಾಂಧೀ ಸಿದ್ದರಾಮಯ್ಯ ಸ್ವತಃ ತಮ್ಮ ಸಮುದಾಯವನ್ನೇ ಜಾತಿಗಣತಿಯಲ್ಲಿ ಕೆಳಗೆ ಹಾಕಿದ್ದಾರೆ. ಲಿಂಗಾಯತ, ವೀರಶೈವ ಒಡೆದರು ಮುಸ್ಲಿಂರು ಮೂರು ಕಡೆ ಮೀಸಲಾತಿ ತೆಗೆದುಕೊಳ್ತಾರೆ.

ಬ್ರಾಹ್ಮಣರು ಸಹ ಈಗ ದೇಶದಲ್ಲಿ ಅಲ್ಪಸಂಖ್ಯಾತರಿದ್ದಾರೆ ಲಿಂಗಾಯತ ಸಮುದಾಯ ಉಳಿವಿಗಾಗಿ ಸುಪ್ರೀಂ ಕೋರ್ಟ್ ನಲ್ಲಿ ನಾವು ಹೋರಾಟ ಮಾಡ್ತಾ ಇದ್ದೇವೆ
ಸಿದ್ದರಾಮಯ್ಯ ಪಾಕಿಸ್ತಾನ್ ಪರವಾಗಿ ಮಾತನಾಡ್ತಾ ಇದ್ದಾರೆ. ಹಿಂದೂಗಳ ರಕ್ಷಣೆ ಎಲ್ಲಿದೆ? ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಆಗ್ತಿದೆ. ಇಂತಹದನ್ನ ಬಿಟ್ಟು ಕಾಶ್ಮೀರದಲ್ಲಿ ಸೆಕ್ಯೂರಿಟಿ ಲ್ಯಾಪ್ಸ್ ಆಗಿದೆ ಅಂತಾರೆ. ನರೇಂದ್ರ ಮೋದಿಯವರ ಬಗ್ಗೆ ಮಾತನಾಡೊ ನೈತಿಕತೆ ಕಾಂಗ್ರೆಸ್ ಗೆ ಇಲ್ಲಾ ಎಂದರು.

ನರೇಂದ್ರ ಮೋದಿ ಎದುರು ಸಂತೋಷ ಲಾಡ್ ಬಚ್ಚಾ

ಲಾಡ್ ಗೆ ಏನು ನೈತಿಕತೆ ಇದೆ ಹೀಗೆ ಮಾತನಾಡುವುದರಿಂದ ರಾಹುಲ್ ಗಾಂಧಿ ಸೋನಿಯಾ ಗಾಂಧಿ ಖುಷಿಯಾಗಿ ನನ್ನ ಮಂತ್ರಿ ಸ್ಥಾನ ಉಳಿಯುತ್ತೆ ಅಂತ ಲಾಡ್ ಮಾತನಾಡುತ್ತಿದ್ದಾನೆ ಎಂದು ಆರೋಪಿಸಿದರು. ಕಳೆದ ಬಾರಿಯೇ ಕಾಂಗ್ರೆಸ್ ಸೋಲ್ತಿತ್ತು, ಆದರೆ ನಮ್ಮಲ್ಲೇ ಅಡ್ಜಸ್ಟಮೆಂಟ್ ಇದ್ದಾರಲ್ಲ ಎಂದರು.

ರೈಲ್ವೆ ಪರೀಕ್ಷೆಯಲ್ಲಿ ಮಂಗಳ ಸೂತ್ರ ತೆಗೆಸುವ ವಿಚಾರ

ಯಾರೇ ಮಾಡಿದ್ರು ನಾವು ಸಮರ್ಥನೆ ಮಾಡಿಕೊಳ್ಳೋದಿಲ್ಲ. ನಾನೇನು ಯಾವ ಪಕ್ಷದಲ್ಲೂ ಇಲ್ಲಾ ಜನಿವಾರ ವಿಷಯದಲ್ಲಿ ಕೈಗೊಂಡಂತ ಕ್ರಮ ಇಲ್ಲಿಯೂ ಕೈಗೊಳ್ಳಬೇಕು ಎಂದರು. ಈ ಬಗ್ಗೆ ಪ್ರಲ್ಹಾದ ಜೋಶಿ ಅವರಿಗೆ ಪ್ರಶ್ನೆ ಕೇಳಿ

ಶಾಸಕರ ಅಮಾನತ್ತು ವಿಚಾರಕ್ಕೆ ಯತ್ನಾಳ್ ಪ್ರತಿಕ್ರಿಯೆ

ಮೇಲೆ ಹೋಗಿ ಗಲಾಟೆ ಮಾಡೋದಕ್ಕೆ ಸೂಚನೆ ಕೊಟ್ಟಿದ್ದು ವಿಜಯೇಂದ್ರ. ಪ್ರಚೋದನೆ ಮಾಡಿದ್ದೆ ವಿಜಯೇಂದ್ರ. ಬಿಜೆಪಿಯಲ್ಲಿ ಎಲ್ಲರಿಗೂ ಅಮಾನತ್ತ ಆಗಿದೆ. ಯಾವುದೇ ಸಭೆಗೆ ಭಾಗಿ ಆಗೋಕೆ ಆಗ್ತಿಲ್ಲ ಅಪ್ರಭದ್ದ ಅಧ್ಯಕ್ಷನನ್ನ ಮಾಡಿದ್ದೆ ತಪ್ಪು ಎಂದರು.

ಪಾಕಿಸ್ತಾನ್ ಪ್ರಧಾನಿ ಅಣುಬಾಂಬ್ ಬೆದರಿಕೆ ವಿಚಾರ

ನಮ್ಮಲ್ಲಿ ದೀಪಾವಳಿಗೆ ಹಾರಿಸುವ ಪಟಾಕಿ ಇದಾವಾ? ನಾಲ್ಕು ಒಗೆದರೆ ಪಾಕಿಸ್ತಾನ್ ಕಾಣದಂತಾಗುತ್ತೆ. ರಷ್ಯಾ, ಅಮೇರಿಕ, ಚೀನಾಗೆ ಸಮನಾಗಿದೆ
ವಿಶ್ವ ನಾಯಕರಾಗಿ ನರೇಂದ್ರ ಮೋದಿ ಇದ್ದಾರೆ. ಈಗ ಸ್ನೇಹಿತ ದೇಶಗಳಿವೆ, ಮೊದಲಿನಂತೆ ಇಲ್ಲಾ ಚೀನಾದ ವ್ಯಾಪಾರ ಆಗೋದೇ ಭಾರತದಿಂದ, ಬಂದ್ ಮಾಡಿದ್ರೆ ದಿವಾಳಿ ಆಗುತ್ತೆ. ಇಸ್ರೇಲ್ ನಂತರ ಭಾರತೀಯರೇ ಶ್ರೇಷ್ಠ ಇದ್ದಾರೆ. ನೆಹರು ಭಾರತ ಅಲ್ಲಾ ಇದು, ನರೇಂದ್ರ ಮೋದಿ ಭಾರತ ಇದು ಎಂದರು.

ಕಲಬುರಗಿ ಪಾಕಿಸ್ತಾನ್ ಧ್ವಜ ಅಂಟಿಸಿದ ವಿಚಾರ

ಹಾಕಿದವರ ಮೇಲೆ ಕೇಸ್ ಹಾಕ್ತಾರೆ ತೆಗೆದವರ ವಿರುದ್ಧ ಯಾಕೆ ಕೇಸ್ ಮಾಡೋದಿಲ್ಲ. ಖರ್ಗೆ ಅವರು ಇದ್ದಾರಲ್ಲ ಹೋಗಾಗಿ ಎಂದು ಆರೋಪ ಮಾಡಿದರು.

ಅನಿವಾರ್ಯ ಆದ್ರೆ ಪಾಕಿಸ್ತಾನ್ ದ ಮೇಲೆ ಭಾರತ ಯುದ್ಧ ಮಾಡುತ್ತೆ

ಭಾರತದ ಒಳ ಹಾಗೂ ಹೊರ ಇರುವ ಎರಡು ವಿರೋಧಿಗಳನ್ನ ಎದುರಿಸಬೇಕು. ಹಿಂದೂ ವಿರೋಧಿಗಳಿಗೆ ಪಾಠ ಕಲಿಸಬೇಕು .ನಿಜಗುಣಾನಂದ ಸ್ವಾಮೀಜಿ ಅಲ್ವಾ, ನೀನು ತೊಟ್ಟಿದ್ದು ಹಿಂದೂಗಳ ಕಾವಿ, ಸಾಬರನ್ನ ಪ್ರಚೋದನೆ ಮಾಡೋಕೆ ಅಲ್ಲಾ. ಸಾನೆಹಳ್ಳಿ ಸ್ವಾಮೀಜಿ ಹೇಳ್ತಾನೆ ಮುಸ್ಲಿಂ, ಲಿಂಗಾಯತ ಒಂದು ಅಂತಾನೆ. ಈಗಾಗಲೇ ಹಿಂದೂ ಪಕ್ಷ ಕಟ್ಟೋದಕ್ಕೆ ಸಂಘಟನೆಗಳೊಂದಿಗೆ ಸಭೆ ಮಾಡ್ತಾ ಇದ್ದೇನೆ ಎಂದರು.

Tags:

error: Content is protected !!