ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡಿರುವ ನಟಿ ರನ್ಯಾ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ತಪ್ಪಿತಸ್ಥ ಅಧಿಕಾರಿಗಳಿದ್ದರೂ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಟಿ ರನ್ಯಾ ಪ್ರಕರಣದಲ್ಲಿ ದೊಡ್ಡ ಜಾಲ ಇದೆ. ಇದರಲ್ಲಿ ರಾಜಕಾರಣಿಗಳು, ಮಂತ್ರಿಗಳು, ಪೊಲೀಸ್ ಅಧಿಕಾರಿಗಳ ಹೆಸರುಗಳು ಕೇಳಿ ಬಂದಿವೆ. ಈಗಾಗಲೇ ಜಾರಿ ನಿರ್ದೇಶನಾಲಯ (ಇಡಿ) ಮಧ್ಯಪ್ರವೇಶಿಸಿದೆ. ಇದರಲ್ಲಿ ಭಾಗಿಯಾದವರನ್ನು ಪತ್ತೆ ಹೆಚ್ಚಲು ಸಿಬಿಐ ತನಿಖೆಗೆ ಒಪ್ಪಿಸಬೇಕು. ರನ್ಯಾಗೆ ಪ್ರೋಟೋಕಾಲ್ ಯಾರು ಕೊಟ್ಟಿದ್ದು?, ಯಾವ ಆಧಾರದ ಮೇಲೆ ಕೊಡಲಾಗಿತ್ತು?. ಇದನ್ನು ರಾಜ್ಯ ಸರ್ಕಾರವೇ ಹೇಳಬೇಕು. ಅಲ್ಲದೇ, ಇಷ್ಟೊಂದು ಚಿನ್ನ ಸಾಗಾಟಕ್ಕೆ ಬಿಟ್ಟಿದ್ದು ಕೇಂದ್ರದ ಅಧಿಕಾರಿಗಳದ್ದು ಸಹ ತಪ್ಪು. ಹೀಗಾಗಿ ತಪ್ಪು ಮಾಡಿದವರು ಯಾರೇ ಆಗಿದ್ದರೂ, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದರು.