ATTACK

ಬೆಳಗಾವಿಯಲ್ಲಿ ವ್ಯಕ್ತಿಯ ಮೇಲೆ ಮೂರು ಕರಡಿಗಳಿಂದ ಡೆಡ್ಲಿ ಅಟ್ಯಾಕ್!

Share

ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಣಕುಂಬಿ ಅರಣ್ಯ ವ್ಯಾಪ್ತಿಯ ಚಿಗುಳೆ ಗ್ರಾಮದಲ್ಲಿ ಯುಗಾದಿ ಹಬ್ಬಕ್ಕೆ ತಳಿರು ತರಲು ಹೋದ ವ್ಯಕ್ತಿಯೋರ್ವನ ಮೇಲೆ ದಾಳಿ ನಡೆಸಿದ ಮೂರು ಕರಡಿಗಳು ಮುಖದ ಭಾಗವನ್ನೇ ತಿಂದು ಹಾಕಿವೆ.

ಬೆಳಗಾವಿ ಜಿಲ್ಲೆಯ ಕಣಕುಂಬಿ ಅರಣ್ಯ ವ್ಯಾಪ್ತಿಯ ಚಿಗುಳೆ ಗ್ರಾಮದಲ್ಲಿ ಯುಗಾದಿ ಹಬ್ಬದ ಹಿನ್ನೆಲೆ ಬೇವು,ಮಾವಿನ ಎಲೆ ತರೋದಕ್ಕೆ ಜಮೀನಿಗೆ ಹೋದಾಗ ಕರಡಿಗಳು ದಾಳಿ ನಡೆಸಿವೆ. ಕರಡಿ ದಾಳಿಯಲ್ಲಿ ಚಿಗುಳೆ ಗ್ರಾಮದ ವಿಲಾಸ ಚಿಖಲಕರ್ (55) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಂದು ದೊಡ್ಡ ಕರಡಿ, ಎರಡು ಮರಿಗಳಿಂದ ದಾಳಿ ಮಾಡಿರುವ ಶಂಕೆಯಿದ್ದು, ಮುಖದ ಭಾಗವನ್ನೇ ಕರಡಿಗಳು ತಿಂದು ಹಾಕಿವೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕರಡಿ ದಾಳಿ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಣಕುಂಬಿ RFO ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಖಾನಾಪುರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:

error: Content is protected !!