Uncategorized

ಧಾರವಾಡದಲ್ಲಿ ಕೆಟ್ಟು ನಿಂತ ಅಂಬ್ಯುಲೆನ್ಸ್‌ಗೆ ಬೆಂಕಿ, ಬೆಂಕಿಯ ಅರ್ಭಟಕ್ಕೆ ಸುಟ್ಡು ಕರಲಕಲಾದ ವಾಹನ, ತಪ್ಪಿದ ಅನಾಹುತ.

Share

ಕಸಕ್ಕೆ ಹಚ್ಚಿದ ಬೆಂಕಿಯು ಪಕ್ಕದಲ್ಲಿ ಕೆಟ್ಟು ನಿಂತಿದ್ದ ಅಂಬ್ಯುಲೆನ್ಸ್‌ಗೆಯು ತಗುಲಿ ಹೊತ್ತಿ ಉರಿದಿರುವ ಘಟನೆ ಧಾರವಾಡ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಡೆದಿದ್ದು, ಬಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಧಾರವಾಡ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಈ ದುರ್ಘಟನೆ ನಡೆದಿದೆ. ಮೊದಲು ಕಸಕ್ಕೆ ಬೆಂಕಿ ಹಚ್ಚಲಾಗಿದೆ, ಕಸದ ರಾಶಿಯ ಬಳಿಯೇ ಅದರ ಕೆಟ್ಟಿದ್ದ ಅಂಬ್ಯುಲೆನ್ಸ್‌ ಒಂದನ್ನು ನಿಲ್ಲಿಸಲಾಗಿತ್ತು. ಕಸಕ್ಕೆ ಬಿದ್ದಿದ್ದ ಬೆಂಕಿ ಆ ಅಂಬ್ಯುಲೆನ್ಸ್‌ಗೂ ತಗುಲಿದೆ. ಇದರಿಂದ ಅಂಬ್ಯುಲೆನ್ಸ್ ಧಗಧಗನೇ ಹೊತ್ತಿ ಉರಿದಿದೆ. ಆ ಅಂಬ್ಯುಲೆನ್ಸ್ ಪಕ್ಕವೇ ಬಿಲ್ಡಿಂಗ್ ಕೂಡ ಇದ್ದು, ಅದೃಷ್ಟವಶಾತ್ ಬೆಂಕಿಯ ಕಟ್ಟಡದ ಒಳಗಡೆ ಚಾಚಿಲ್ಲ ಅನ್ಮುವುದು ಸಮಾಧನಕರ ಸಂಗತಿಯಾಗಿದೆ. ಈ ಬೆಂಕಿ ಕಂಡು ಆಸ್ಪತ್ರೆಯಲ್ಲಿದ್ದ ಸಾರ್ವಜನಿಕರು ಗಾಬರಿಗೊಂಡಿದ್ದರು. ಕೆಲವರು ಬೆಂಕಿ ನಂದಿಸಲು ಮುಂದಾದರೂ ಬೆಂಕಿ ನಿಯಂತ್ರಣಕ್ಕೆ ಬರದಿದ್ದರಿಂದ ಅಗ್ನಿಶಾಮಕ ದಳದವರನ್ನು ಸ್ಥಳಕ್ಕೆ ಕರೆಯಿಸಿ ಬೆಂಕಿ ನಂದಿಸುವ ಕೆಲಸ ಮಾಡಲಾಗಿದೆ.

Tags:

error: Content is protected !!