ಸರಣಿ ಅಪಘಾತ ಸಂಭವಿಸಿ ಮೂವರು ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದ ಬಳಿ ನಡೆದಿದೆ.

ಟಾಟಾ ಏಸ್
ಕಾರು ಮತ್ತು ಎರಡು ಬೈಕ್ ಗಳ ಮಧ್ಯೆ ಡಿಕ್ಕಿ ಸಂಭವಿಸಿದೆ. ಮೂರು ವಾಹನದಲ್ಲಿದ್ದವರಲ್ಲಿ ಒಬ್ಬೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಜಮಖಂಡಿ ತಾಲೂಕಿನ ಜಂಬಗಿ ಬಿ.ಕೆ ಗ್ರಾಮದ ನಿವಾಸಿ ಆನಂದ ಬಾಡಗಿ(22), ಬೆಳಗಾವಿ ಜಿಲ್ಲೆ ಅರಬಾವಿ ನಿವಾಸಿ ಭೀಮಪ್ಪ ಗಂಟೆಣ್ಣವರ್ (42) ಮತ್ತು ವಿಜಯಪುರ ಜಿಲ್ಲೆ ಬೆನಕನಹಳ್ಳಿಯ ಮಹಾಂತೇಶ ಹೊನಕಟ್ಟಿ (33) ಎಂದು ಗುರುತಿಸಲಾಗಿದೆ.
ಜಮಖಂಡಿಯಿಂದ ವಿಜಯಪುರಕ್ಕೆ ಹೊರಟಿದ್ದ ಟಾಟಾ ಏಸ್ ಮತ್ತು ವಿಜಯಪುರದಿಂದ ಜಮಖಂಡಿಯತ್ತ ಬರುತ್ತಿದ್ದ ಕಾರು ನಡುವೆ ಈ ಡಿಕ್ಕಿ ಸಂಭವಿಸಿದ್ದು, . ಹಿಂದಿನಿಂದ ಬರುತ್ತಿದ್ದ ಎರಡು ಬೈಕ್ ಗಳು ಚಾಲಕನ ನಿಯಂತ್ರಣ ತಪ್ಪದ ಪರಿಣಾಮ ಏಸ್ ವಾಹನಕ್ಕೆ ಡಿಕ್ಕಿ ಹೊಡೆದಿವೆ ಎಂದು ಮಾಹಿತಿ ತಿಳಿದುಬಂದಿದೆ. ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.