ಗೋಕಾಕ : ಹೊಟ್ಟೆ ಪಾಡಿಗಾಗಿ ಕಬ್ಬು ಕಟಾವು ಮಾಡಲು ಬಂದ ದಂಪತಿಗಳಿಬ್ಬರ ನಡೆದ ಗಲಾಟೆ ಕೊನೆಗೆ ಸಾವಿನಲ್ಲಿ ಅಂತ್ಯಗೊಂಡಿದೆ.
ಹೌದು ಮಹಾರಾಷ್ಟ್ರ ರಾಜ್ಯದ ಎವತಮಾಳ ಜಿಲ್ಲೆಯ ಮಹಗಾಂವ ತಾಲೂಕಿನ ಚಂಬುರ್ದರಾ ಗ್ರಾಮದ ಬಾಲಾಜಿ ಜಂಗಲೆ ಮತ್ತು ಮೀರಾಬಾಯಿ ಜಂಗಲೆ ಆರು ವರ್ಷದ ಹಿಂದೆ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದರು.
ತಮ್ಮ ಹೊಟ್ಟೆ ಪಾಡಿಗಾಗಿ ಉಪ್ಪಾರಟ್ಟಿ ಗ್ರಾಮಕ್ಕೆ ಹದಿನಾಲ್ಕು ಜನ ಗ್ಯಾಂಗನೊಂದಿಗೆ ಕಬ್ಬು ಕಟಾವು ಮಾಡಲು ಉಪ್ಪಾರಟ್ಟಿ ಗ್ರಾಮದಲ್ಲಿ ಬಿಡಾರ ಹೂಡಿದ್ದರು.ಆದರೆ ಇವತ್ತು ಮಧ್ಯಾಹ್ನ ಆರೋಪಿ ಬಾಲಾಜಿ ಮಧ್ಯಪಾನ ಮಾಡಿ ಬಂದು ಕ್ಷುಲ್ಲಕ ಕಾರಣಕ್ಕಾಗಿ ಹೆಂಡತಿಯ ಜೊತೆ ಜಗಳ ಮಾಡಿದ್ದ, ಜಗಳ ವಿಕೊಪಕ್ಕೆ ತಿರುಗಿ ಕೂಪಿತಗೊಂಡ ಬಾಲಾಜಿ ಜಂಗಲೆ(40) ಇತ ಪತ್ನಿ ಮೀರಾಬಾಯಿ ಜಂಗಲೆ (30) ತಲೆ ಮೇಲೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ,
ಇನ್ನು ಸುದ್ದಿ ತಿಳಿದ ಗೋಕಾಕ ಡಿಎಸಪಿ,ಸಿಪಿಐ,ಪಿ,ಎಸ್,ಐ, ಇವರು ಸ್ಥಳಕ್ಕೆ ಆಗಮಿಸಿ ಪರಿಶಿಲಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಷ್ಟೆ ಅಲ್ಲ ಕೊಲೆ ಮಾಡಿದ್ದನ್ನು ಖುದ್ದು ಬಾಲಾಜಿ ಜಂಗಲಿ ಇತ ವಿಡಿಯೋ ಮಾಡಿ ಆತನ ಸಂಬಂದಿಕರಿಗೆ ಕಳಿಸಿದ್ದಾನೆ,ಅದು ಆತನ ಮೊಬೈಲನಲ್ಲಿ ಸೇರೆಯಾಗಿದ್ದು ಮುಂದಿನ ತನಿಖೆಗಾಗಿ ಮೊಬೈಲ್ ಪೋಲಿಸರ ವಶದಲ್ಲಿದೆ,
ಇನ್ನು ಬಾಳಿ ಬದುಕಬೇಕಾದ ದಂಪತಿಗಳ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಸಾವನಪ್ಪಿದ್ದಾಳೆ,ಆದರೆ ಯಾವ ತಪ್ಪನ್ನು ಮಾಡದ ಇಬ್ಬರು ಮಕ್ಳಳು ಅನಾಥರಾಗಿದ್ದು ಮಾತ್ರ ನಿಜ,