ವಿಜಯಪುರ: ಅನುಸೂಚಿತ ಬುಡಕಟ್ಟುಗಳ ದೌರ್ಜನ್ಯ ಅಧಿನಿಯಮದಡಿ ಬರುವ ಕಂದಾಯ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ ಪ್ರಸಾದ ಧನಸಿಂಗ್ ಚವ್ಹಾಣ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿ ವಿಜಯಪುರ ಉಪವಿಭಾಗಾಧಿಕಾರಿಗಳು ಗುರುನಾಥ ದಡ್ಡೆ ಅವರು ಆದೇಶ ಹೊರಡಿಸಿದ್ದಾರೆ. ಪ್ರಸಾದ ಧನಸಿಂಗ್ ಚವ್ಹಾಣ ಅವರು ವಿಜಯಪುರದ ಬಂಜಾರ ನಗರದಲ್ಲಿರುವ ಪ್ರತಿಷ್ಠಿತ ವಿಜಯಪುರ ವಿದ್ಯಾವರ್ಧಕ ಸಂಘದ ಸಹ ಕಾರ್ಯದರ್ಶಿಯಾಗಿದ್ದಾರೆ.

ಅವರನ್ನು ಸಮಿತಿಯ ಎನ್.ಜಿ.ಓ ಅಧಿಕಾರೇತರ ನಾಮನಿರ್ದೇಶಿತ ಸದಸ್ಯ ರನ್ ನಾಗಿ ನಾಮನಿರ್ದೇಶನ ಸದೃಮಾಡಿ ಉಪ ವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ನೂತನ ಸದಸ್ಯ ಪ್ರಸಾದ ಧನಸಿಂಗ್ ಚವ್ಹಾಣ ಅವರಿಗೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ.