Bidar

ಬೀದರನಲ್ಲಿ ಎಟಿಎಂಗೆ ಹಣ ಹಾಕಲು ಹೋದ ವಾಹನ ದರೋಡೆ ಹಿನ್ನೆಲೆ… ಧಾರವಾಡ ಅಲರ್ಟ್ ಆದ ಎಸಿಪಿ, ಎಟಿಎಂ ಭದ್ರತಾ ಸಿಬ್ಬಂದಿ ಹಾಗೂ ಹಣ ಹಾಕುವ ವಾಹನ ಸಿಬ್ಬಂದಿ ಜತೆ ಮೀಟಿಂಗ್..

Share

ಬೀದರನಲ್ಲಿ ಬೈಕ್ ಮೇಲೆ ಬಂದು ಇಬ್ಬರು ಖದೀಮರು ಎಟಿಎಂಗೆ ಹಣ ಹಾಕಲು ಬಂದಿದ್ದ ವಾಹನದ ಮೇಲೆ ದಾಳಿ‌ ಮಾಡಿ ಹಣ ದರೋಡೆ ಮಾಡಿಕೊಂಡ ಹೋದ ಹಿನ್ನಲೆಯಲ್ಲಿ, ಧಾರವಾಡದಲ್ಲಿ ಪೊಲೀಸ್ ಇಲಾಖೆ ಅಲರ್ಟ ಆಗಿದೆ. ಬ್ಯಾಂಕ ಭದ್ರತಾ ಸಿಬ್ಬಂದಿ ಸೇರಿ ಎಟಿಎಂಗೆ ಹಣ ಹಾಕವ ವಾಹನದ ಸಿಬ್ಬಂದಿಗಳೊಂದಿಗೆ ಮೀಟಿಂಗ್ ಮಾಡಿ ಅನೇಕ ವಿವರಣೆ ಪಡೆದುಕೊಂಡು ಹಲವು‌ ಸೂಚನೆಗಳನ್ನು ನೀಡಲಾಗಿದೆ.

ಧಾರವಾಡ ಎಸಿಪಿ‌ ಪ್ರಶಾಂತ್ ಸಿದ್ಧನಗೌಡರ ನೇತೃತ್ವದಲ್ಲಿ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಮೇಲ್ಬಾಗದ‌ ಎಸಿಪಿ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಧಾರವಾಡ ನಗರ ವ್ಯಾಪ್ತಿಯ ಬ್ಯಾಂಕ ಭದ್ರತಾ ಸಿಬ್ಬಂದಿ, ಎಟಿಎಂಗೆ ಹಣ ಹಾಕುವ ವಾಹನ‌ ಭಧ್ರತಾ ಸಿಬ್ಬಂದಿ ಸೇರಿ ಎಜೆನ್ಸಿ ಮುಖ್ಯಸ್ಥರು ಭಾಗವಹಿಸಿರು ಹಾಜರಿದ್ದು, ತಮ್ಮ ಭದ್ರತೆಯ ಕುರಿತು ಮಾಹಿತಿ ನೀಡಿದರು. ‌ಇನ್ನೂ ಹಣ ಸಾಗಾಟ ಮಾಡುವ ವಾಹನ‌ ಭದ್ರತಾ ಸಿಬ್ಬಂದಿ ಸೇರಿ ವಾಹನಗಳ ಜಿಪಿಎಸ್, ಸಿಸಿ ಕ್ಯಾಮರಾ ಕುರಿತು ಜಾಗೃತಿ ಇರಬೇಕು. ಯಾವುದೇ ಅಹಿತಕರ ಘಟನೆ ಮುನ್ಸೂಚನೆ ಸಿಕ್ಕ‌ ಕೂಡಲೇ ತಾವು ಇರುವ ಹತ್ತಿರ ಪೊಲೀಸ‌ ಠಾಣೆಗೆ ಮಾಹಿತಿ ನೀಡುವಂತೆ ಈ ವೇಳೆ ಎಸಿಎಪಿ ಪ್ರಶಾಂತ್ ಸಿದ್ಧನಗೌಡರವರು ಸೂಚನೆ ನೀಡಿದರು.‌ ಇನ್ನೂ ಈ ಸಂದರ್ಭದಲ್ಲಿ ಧಾರವಾಡ. ನಗರದ ಮೂರು ಪೋಲಿಸ್ ಠಾಣೆಯ ಸಿಪಿಐಗಳಾದ ಉಪನಗರ ದಯಾನಂದ ಶೇಗುಣಸಿ, ವಿದ್ಯಾಗಿರಿ ಸಂಗಮೇಶ್ ದಿಡದನಾಳ,
ಶಹರ ಠಾಣೆ ನಾಗೇಶ್ ಕಾಡದೇವರ ಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ‌

Tags:

error: Content is protected !!