State

ಮೈಕ್ರೋ ಫೈನಾನ್ಸಗಳ ಕಿರುಕುಳ ತಪ್ಪಿಸಲು ಸರ್ಕಾರದ ಹೊಸ ಪ್ಲ್ಯಾನ್ …

Share

ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ವಿಚಾರವಾಗಿ ಕೌಶಲ್ಯ ಅಭಿವೃದ್ಧಿ ಇಲಾಖೆ ಹೊಸ ಪ್ಲ್ಯಾನನ್ನು ರೂಪಿಸಿದೆ. ಸರ್ಕಾರದ ಹಂತದಲ್ಲೇ ಕ್ರೆಡಿಟ್ ಕೋ ಆಪರೇಟ್ಹಿವ್ ಸೊಸೈಟಿಯನ್ನು ಸ್ಥಾಪಿಸಿ, ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಯೋಚನೆಯಲ್ಲಿದೆ ಎಂದು ಕೌಶಲ್ಯ ಅಭಿವೃದ್ಧಿ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರಾದ ಶರಣಪ್ರಕಾಶ ಪಾಟೀಲ್ ತಿಳಿಸಿದ್ದಾರೆ.

ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ವಿಚಾರವಾಗಿ ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ಹೊಸ ಪ್ಲ್ಯಾನನ್ನು ರೂಪಿಸಲಾಗುತ್ತಿದೆ. ರಾಜ್ಯದಲ್ಲಿ ಕ್ರೆಡಿಟ್ ಕೋ ಆಪರೇಟ್ಹಿವ್ ಸೊಸೈಟಿಯನ್ನು ಸ್ಥಾಪಿಸಲು ಇಲಾಖೆ ಮುಂದಾಗಿದೆ. ಸರ್ಕಾರದಿಂದಲೇ ಸ್ವಸಹಾಯ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುವ ಯೋಜನೆಯನ್ನು ಸರ್ಕಾರ ರೂಪಿಸುತ್ತಿದೆ. ಈ ಕುರಿತು ಅಧ್ಯಯನ ಮಾಡಿ ಅಧಿಕಾರಿಗಳು ವರದಿಯನ್ನು ನೀಡಿದ್ದು, ಇದರ ಆಧಾರದ ಮೇಲೆ, ಹೊಸ ಯೋಜನೆಗೆ ಸಿದ್ಧತೆಯನ್ನು ಮಾಡಲಾಗಿದೆ. ಆರೋಗ್ಯ ಸರಿಯಿಲ್ಲ ಅಥವಾ ಬೇರೆ ಕಾರಣಕ್ಕೆ ತೆಗೆದುಕೊಂಡ ಸಾಲವನ್ನು ವಿಕೃತಿಯಿಂದ ಮರುಪಾವತಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಮೈಕ್ರೋ ಫೈನಾನ್ಸಗಳ ಕುರಿತು ಸರ್ಕಾರ ನಿರ್ಣಯ ಕೈಗೊಳ್ಳಲಿದೆ ಎಂದು ಸಚಿವ ಶರಣ ಪ್ರಕಾಶ ಪಾಟೀಲ್ ತಿಳಿಸಿದ್ದಾರೆ. ಸಿಎಂ ಸಿದ್ಧರಾಮಯ್ಯನವರು ಇಂದು ಸಭೆಯನ್ನು ಮಾಡುತ್ತಿದ್ದಾರೆ. ಇನ್ನು ಸರ್ಕಾರದ ಹಂತದಲ್ಲಿ ಹಣವನ್ನು ನೀಡಿದ್ರೇ, ಈ ಕಿರುಕುಳ ಆಗಲ್ಲ ಎಂದಿದ್ದಾರೆ.

Tags:

error: Content is protected !!