ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾಗಿದೆ. ರಾಜ್ಯದಲ್ಲಿ ಎರಡು ಪಕ್ಷದಲ್ಲಿ ಆರೋಗ್ಯಕರ ವಾತಾವರಣ ಇದ್ದು. ಶಿಗ್ಗಾಂವಿ, ಹಾಗೂ ಸಂಡೂರ ಎರಡು ಕ್ಷೇತ್ರದಲ್ಲಿ ಹೊಂದಾಣಿಕೆ ಚುನಾವಣೆ ನಡೆಯಬೇಕು ಹೀಗಾಗಿ ಎರಡು ಕ್ಷೇತ್ರಗಳಲ್ಲಿ ಭೇಟಿ ಮಾಡ್ತೀದಿನಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು ಚನ್ನಪಟ್ಟಣ ವಿಚಾರವಾಗಿ ಇಂದು ಸಂಜೆ ಬೆಂಗಳೂರಲ್ಲಿ ಸಭೆ ಇದೆ. ಈಗಾಗಲೇ ಹೈಕಮಾಂಡ್ ನಾಯಕರು ವರದಿ ತರೆಸಿಕೊಂಡೀದಾರೆ.
ನಿಖಿಲ್ ಕುಮಾರಸ್ವಾಮಿ ಅಥವಾ ಯೋಗೇಶ್ವರ ಯಾರೇ ಆಗಲಿ. ಎರಡು ಪಕ್ಷಗಳ ನಾಯಕರ ತೀರ್ಮಾನ ಅಂತಿಮ ಎಂದರು. ನಾನು ಇವತ್ತೆ ಅಧಿಕಾರ ಸಿಗಬೇಕು ಅನ್ನೋ ಹಪಾಹಪಿಯಲ್ಲಿ ಕೆಲಸ ಮಾಡತಿಲ್ಲ. ನಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡತೀದಿನಿ. ನಾನು ಶಿಗ್ಗಾಂವಿಯಲ್ಲಿ ಜನತಾದಳ ಕಾರ್ಯಕರ್ತರ ಸಭೆ ಮಾಡತೀದಿವಿ ಎಂದ ಅವರು ಮುಂದೆ ಜಂಟಿ ಸಭೆ ಮಾಡತೀವಿ ಎಂದರು.