Banglore

ಕಾಂಗ್ರೆಸನಿಂದ ಆಫರ್ ಬಂದರೇ ನೋಡೋಣ… ಸಿಎಂ ಚನ್ನಪಟ್ಟಣಕ್ಕೆ ಅವಕಾಶ ಮಾಡಿಕೊಟ್ಟರೇ ಅದು ಅವರ ದೊಡ್ಡ ಗುಣ-ಸಿ.ಪಿ ಯೋಗೇಶ್ವರ…

Share

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾನು ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುವುದನ್ನು ಬಯಸಿದ್ದರೆ ಅದು ಅವರ ದೊಡ್ಡ ಗುಣ, ತನಗೆ ಕಾಂಗ್ರೆಸ್ ಪಕ್ಷ ಹೊಸದೇನೂ ಅಲ್ಲ, ಹಿಂದೆ ಆ ಪಕ್ಷದಲ್ಲಿದ್ದವನು, ಅಲ್ಲಿಂದ ಆಫರ್ ಬಂದರೆ ಏನು ಮಾಡುವುದು ಅಂತಲೂ ಯೋಚಿಸಿಲ್ಲ, ನೋಡೋಣ ಎಂದು ಯೋಗೇಶ್ವರ್ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಹಿರಿಯ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೋ, ಬಿಜೆಪಿ ಬಂಡಾಯ ಅಭ್ಯರ್ಥಿ, ಅಥವಾ ಕಾಂಗ್ರೆಸ್ ಪಕ್ಷ ಸೇರಿ ಆ ಪಕ್ಷದ ಟಿಕೆಟ್ನಿಂದ ಸ್ಪರ್ಧಿಸಬೇಕೋ ಅನ್ನೋದನ್ನು ನಿರ್ಧರಿಸಿಲ್ಲ, ತಿರುಪತಿ ಹೋಗಿ ಬಂದ ಬಳಿಕ ತಮ್ಮ ಬೆಂಬಲಿಗರ ಜೊತೆ ಸಭೆ ನಡೆಸಿ ಅವರ ಆಶಯದಂತೆ ಒಂದು ತೀರ್ಮಾನಕ್ಕೆ ಬರೋದಾಗಿ ಹೇಳಿದರು.

Tags:

error: Content is protected !!