Dharwad

ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ವೈಯಕ್ತಿಕ ಪರಿಹಾರ ನೀಡಿ ಸಾಂತ್ವಾನ ಹೇಳಿದ ಸಚಿವ ಸಂತೋಷ ಲಾಡ್

Share

ಭಾನುವಾರ ಬೆಳ್ಳಂ ಬೆಳಗ್ಗ ಧಾರವಾಡ ಸಂಪಿಗೆ ನಗರದ ಬಳಿ ಲಾರಿ ಮತ್ತು ಅಟೋ ನಡಯವೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಮೂವರು ಜನ ಸಾವನಪ್ಪಿದ ಹಿನ್ನೆಲೆಯಲ್ಲಿ, ಮೃತರ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಧಾರವಾಡ ಜಿಲ್ಲಾ ಸಚಿವ ಸಂತೋಷ ಲಾಡ್ ಸಾಂತ್ವಾನ‌ ಹೇಳಿ ವೈಯಕ್ತಿಕವಾಗಿ ಪರಿಹಾರ ವಿತರಣೆ ಮಾಡಿದರು.

ನಗರದ ಕೆಲಗೇರಿ ಮುಖ್ಯ ರಸ್ತೆಯ ಸಂಪಿಗೆ ನಗರ ರಸ್ತೆ ಮಾರ್ಗವಾಗಿ ತಮ್ಮ ವೈಯಕ್ತಿಕ ಕೆಲಸಕ್ಕೆ ಅಟೋದಲ್ಲಿ ತೆರಳುವ ವೇಳೆ, ಅಟೋ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿತ್ತು. ಹಂಚಿನಮನಿ ಕುಟುಂಬ ಸದಸ್ಯರಾದ ರಮೇಶ ದುರ್ಗಪ್ಪ ಹಂಚಿನಮನಿ, ಪ್ರಣಯ ಹಂಚಿನಮನಿ ಹಾಗೂ ಅಮರವ್ವ ಹಂಚಿನಮನಿಯವರು ಅಪಘಾತದಲ್ಲಿ ದಾರುಣವಾಗಿ ಸಾವನಪ್ಪಿದ್ದರು.

ವಿಷಯ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹಂಚಿನಮನಿ ಕುಟುಂಬಸ್ಥರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವಾನ ಜತೆಗೆ ಧೈರ್ಯ ಹೇಳಿ ನೋವಿನಲ್ಲಿರುವ ಕುಟುಂಬಸ್ಥರಿಗೆ ವೈಕ್ತಿಕವಾಗಿ ಎರಡು ಲಕ್ಷ ರೂಪಾಯಿ ಪರಿಹಾರ ನೀಡಿ ನೆರವಾದರು.

Tags:

error: Content is protected !!