Dharwad

ಸಿ.ಪಿ.ಯೋಗೇಶ್ವರ ಪಕ್ಷಕ್ಕೆ ಬಂದ್ರೆ ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ – ಸಚಿವ ಸಂತೋಷ ಲಾಡ್

Share

ಚನ್ನಪಟ್ಟಣ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರೋ ಸಿಪಿ ಯೊಗೇಶ್ವರವರು ಕಾಂಗ್ರೆಸ್ ಬರ್ತಾರೆ ಅಂತಾ ಹೇಳಲಾಗುತ್ತಿದೆ. ಬಂದ್ರೆ ನಾನು ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ. ಪಕ್ಷದ ಹೈ ಕಮಾಂಡ್ ಏನ್ ತಿರ್ಮಾಣ ತಗೆದುಕೊಳ್ಳುತ್ತಾರೆ ಅದೇ ಅಂತಿಮ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷಕ್ಕೆ ಯಾರಾದ್ರೂ  ಸೇರಬೇಕಾದ್ರೆ ಹೈಕಮಾಂಡ್ ಇದೆ,ಮುಖ್ಯಮಂತ್ರಿಗಳು ಇದ್ದಾರೆ. ಜತೆಗೆ ಜನರಲ್ ಸೆಕ್ರೆಟರಿ ಇದ್ದಾರೆ ಅವರೆಲ್ಲರೂ ಅಭಿಪ್ರಾಯದ ಮೇಲೆ ಖಂಡಿತವಾಗಿ ಸ್ವಾಗತ ಮಾಡತ್ತೇವೆ. ಇನ್ನೂ ಸಂಡೂರು ಟಿಕೇಟ್ ಗೊಂದಲ ಸ್ವಾಲ್ವ್ ಆಗಿದೆ‌‌, ಅಂತಿಮವಾಗಿ ಯಾರಿಗೆ ಫೈನಲ್ ಆಗುತ್ತೆ ಅಂಥ ನೋಡಬೇಕು. ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಪಕ್ಷಕ್ಕೆ ಬಿಟ್ಟಿದ್ದು. ನಾವು ಕೇವಲ ಪ್ರಪೋಸಲ್ ಅಷ್ಟೇ ನೋಡೋದು. ಇನ್ನೂ ಶಿಗ್ಗಾವಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಹಿಂದೂ, ಲಿಂಗಾಯತ ಮುಸ್ಲಿಂ ಅಂತ ನಮ್ಮಲ್ಲಿ ನೋಡುವುದಿಲ್ಲ. ನಾವು ಎಲ್ಲರನ್ನೂ ಒಂದೇ ತರ ನೋಡ್ತೀವಿ. ನಮ್ಮಲ್ಲಿ ಟಿಕೆಟ್ ಅನ್ನು ಯಾರಿಗೆ ಕೊಟ್ಟರು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟಿದ್ದೇವೆ ಅಂಥಾ ತಿಳ್ಕೊಳ್ತೀವಿ. ನಮ್ಮದೂ ಸೆಕ್ಯೂಲರ್ ಪಾರ್ಟಿ, ಹಾಗಾಗಿ ಇಲ್ಲಿ ಹಿಂದೂ ಮುಸ್ಲಿಂ ಅಂತಾ ಬರುವುದಿಲ್ಲ ಗೆಲ್ಲವು ಕ್ಯಾಂಡಿಡೇಟ್ಗೆ ಟಿಕೆಟ್ ಕೊಡುತ್ತೇವೆ ಎಂದು ಹೇಳಿದರು.

Tags:

#cpyogeshwar DHARWAD inbelgaum innews SANTOSHLAD
error: Content is protected !!