Uncategorized

ನಾಳೆಯ ಕಿತ್ತೂರು ಉತ್ಸವದ ಅಂಗವಾಗಿ ಸ್ಥಳ ಪರಿಶೀಲಿಸಿದ ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ಮತ್ತು ಕಿತ್ತೂರಿನ ಶಾಸಕ ಬಾಬಾ ಸಾಹೇಬ್ ಪಾಟೀಲ್

Share

ನಾಳೆಯಿಂದ ಪ್ರಾರಂಭವಾಗುವ ಕಿತ್ತೂರು ಉತ್ಸವದ ಪೂರ್ವ ಸಿದ್ಧತೆಗಳು ಮತ್ತು ಕಿತ್ತೂರಿನ ಕೋಟೆಯ ಆವರಣದಲ್ಲಿ ಕಾರ್ಯಕ್ರಮದ ವೇದಿಕೆಯನ್ನು ಮಾಧ್ಯಮದ ವೇದಿಕೆ ಹಾಗೂ ಸಾರ್ವಜನಿಕರು ಕುಳಿತುಕೊಳ್ಳುವ ಸ್ಥಳವನ್ನು ಪರಿಶೀಲನೆ ನಡೆಸಿದರು ಇದೇ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿಗಳು ಮೊಮ್ಮದ್ ರೋಷನ್ ಮತ್ತು ಕಿತ್ತೂರಿನ ಶಾಸಕರು .

ಕಿತ್ತೂರಿನ ಉತ್ಸವದ ಸಿದ್ದತೆಯನ್ನು ಅಚ್ಚುಕಟ್ಟಾಗಿ ಮಾಡಿಕೊಂಡಿದ್ದೇವೆ ಕಿತ್ತೂರು ಉತ್ಸವವನ್ನು ಅತಿ ವಿಜೃಂಭಣೆಯಿಂದ ಮಾಡಲು ನಾವು ಈಗಾಗಲೇ ಸಿದ್ಧವಾಗಿದ್ದೇವೆ ಈ ಉತ್ಸವಕ್ಕೆ ಸಾಕಷ್ಟು ಗಣ್ಯ ವ್ಯಕ್ತಿಗಳು ಕೂಡ ಆಗಮಿಸುತ್ತಾರೆ ಕಿತ್ತೂರಿನ ಉತ್ಸವಕ್ಕೆ ಆಗಮಿಸುವಂತಹ ಎಲ್ಲರಿಗೂ ಕೂಡ ಯಾವುದೇ ಕುಂದು ಕೊರತೆ ಆಗದಂತೆ ಜಿಲ್ಲಾಡಳಿತ ಗಮನ ಹರಿಸುತ್ತದೆ.

ಜಿಲ್ಲಾಧಿಕಾರಿಗಳು ಹೇಳಿದಂತೆ ನಾವು ಕಿತ್ತೂರಿನ ಉತ್ಸವಕ್ಕೆ ಸಂಬಂಧಪಟ್ಟ ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ ಇವತ್ತು ಬೆಳಗಾವಿಯಲ್ಲಿ ರಸಮಂಜರಿ ಕಾರ್ಯಕ್ರಮ ಹಾಗೂ ನಾಳೆಯಿಂದ ಕಿತ್ತೂರಿನಲ್ಲಿ ಉತ್ಸವದ ಕಾರ್ಯಕ್ರಮ ನಾಳೆಯಿಂದ ಕಿತ್ತೂರಿನಲ್ಲಿ ಕಿತ್ತೂರಿನ ಉತ್ಸವವನ್ನು ಅತಿ ವಿಜೃಂಭಣೆಯಿಂದ ನಡೆಯುತ್ತವೆ ಹಾಗೂ ರಾಜ್ಯದ ಸಮಸ್ತ ಜನತೆ ಕೂಡ ಕಿತ್ತೂರಿಗೆ ಆಗಮಿಸಿ ಕಿತ್ತೂರು ಉತ್ಸವವನ್ನು ಕಣ್ತುಂಬಿಕೊಳ್ಳಬೇಕು

ವರದಿಗಾರರು
ಶಾನೂಲ ಮ
ಕಿತ್ತೂರು

Tags:

error: Content is protected !!