ಮುನಿರತ್ನ ಆಡಿಯೋ ಪ್ರಕರಣ ಮುನಿರತ್ನ ಮೇಲೆ ಅಟ್ರಾಸಿಟಿ ಕೇಸ್ ಬುಕ್ ಮಾಡಬೇಕು.ಸಭಾಪತಿಗಳು ಈ ಕೂಡಲೇ ಮುನಿರತ್ನ ಶಾಸಕ ಸ್ಥಾನವನ್ನು ವಜಾಗೊಳಸಬೇಕೆಂದು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು ಸಭಾಪತಿಗಳು ಈ ಕೂಡಲೇ ಮುನಿರತ್ನ ಶಾಸಕ ಸ್ಥಾನವನ್ನು ವಜಾಗೊಳಸಬೇಕು. ಈಗ ಏಕಾಏಕಿ ಪ್ರಕರಣ ತಿರುವು ಪಡೆದುಕೊಂಡಿದೆ ಗೊತ್ತಿಲ್ಲ. ಯಾರನೆಲ್ಲಾ ಮ್ಯಾನೇಜ್ ಮಾಡಿ ಆ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಗೊತ್ತಿಲ್ಲ.
ಯಾವ ರೀತಿ ಒತ್ತಡ ಹಾಕಿದ್ದಾರೋ ಗೊತ್ತಿಲ್ಲ. ಮುನಿರತ್ನ ಮಾತನಾಡಿದ ಧ್ವನಿ ಬಹಳಷ್ಟು ಸ್ಪಷ್ಟವಾಗಿ ಎಲ್ಲರೂ ಕೇಳಿಸಿಕೊಂಡಿದ್ದಾರೆ.ಇದು ಎಲ್ಲರಿಗೂ ಅರ್ಥವಾಗಿದೆ. ಇದು ಎಫ್ ಎಸ್ ಎಲ್ ಗೂ ಸಹ ಕಳುಹಿಸಲಾಗಿದೆ. ಅದರ ವರದಿ ಬರುತ್ತದೆ ಅದು ಬಂದ ಮೇಲೆ ಸತ್ಯಾಂಶ ಹೊರಬರುತ್ತೆ. ಅದ ಏನು ಉಲ್ಟಾ ಹೊಡೆದರೂ ಸತ್ಯ ಮುಚ್ಚಿಡಲು ಆಗೋದಿಲ್ಲ ಎಂದರು.