Banglore

ಬಿಜೆಪಿಗರ ಮುನಿರತ್ನ ಸಮರ್ಥನೆಯ ಹೇಳಿಕೆಗಳು ದಿಗ್ಭ್ರಮೆ ಮೂಡಿಸುತ್ತಿವೆ; ಡಿಸಿಎಂ ಡಿ.ಕೆ. ಶಿವಕುಮಾರ

Share

ನಾವು ಯಾರ ವಿರುದ್ಧವೂ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಬಿಜೆಪಿಗರು ಸತ್ಯವನ್ನು ಅರಿತು ಮಾತನಾಡಲಿ. ನಂತರ ಮುನಿರತ್ನ ಅವರನ್ನು ಸಮರ್ಥಿಸಿಕೊಳ್ಳಲಿ. ಬಿಜೆಪಿಗರ ಮುನಿರತ್ನ ಸಮರ್ಥನೆಯ ಹೇಳಿಕೆಗಳು ದಿಗ್ಭ್ರಮೆ ಮೂಡಿಸುತ್ತಿವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದರು.

ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಮುನಿರತ್ನ ಅವರ ಪ್ರಕರಣದಲ್ಲಿ ಬಿಜೆಪಿಯ ವಿರುದ್ಧ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದೆ ಎಂಬ ಪ್ರಶ್ನೆಗೆ ಪ್ರಕ್ರಿಯಿಸಿದ ಅವರು ಬಿಜೆಪಿ ನಾಯಕರು ಮೊದಲು ಸತ್ಯಾಸತ್ಯತೆಯನ್ನು ಅರಿತು ಮಾತನಾಡಲಿ. ನಾವು ದ್ವೇಷದ ರಾಜಕಾರಣ ಮಾಡುತ್ತಿದ್ದೇವೆಂದು ಅವರು ಪ್ರತಿದಿನ ನಮ್ಮನ್ನು ನೆನಸಿಕೊಳ್ಳುತ್ತಿರಲಿ. ನಾನು ಹಾಗೂ ಸುರೇಶ್‌ ಮುನಿರತ್ನ ಸಿಕ್ಕಿಸಲು ಷಡ್ಯಂತರ ನಡೆಸುತ್ತಿದ್ದೇವೆ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ಹೇಳುವವರು ಹೇಳಲಿ ನನಗೆ ತೊಂದರೆ ಇಲ್ಲ. ಮೊದಲು ಅವರು ಮುನಿರತ್ನ ಅವರನ್ನು ಸಮರ್ಥಿಸಿಕೊಳ್ಳುವುದನ್ನು ಬಿಡಲಿ ಎಂದರು.

Tags:

error: Content is protected !!