ಶಾಸಕ ಮುನಿರತ್ನ ಕೀಳು ಮಟ್ಟದ ವ್ಯಕ್ತಿತ್ವ ಇತ್ತು ಎನ್ನುವುದು ಸ್ಪಷ್ಟವಾಗಿದೆ ಜನರಿಗೆ ತಿಳಿಯುತ್ತಿದೆ. ಶಾಸಕನಾಗಿ ಮುನಿರತ್ನ ಮುಂದುವರೆಯುವ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು ಮಾನವೀಯತೆ , ಮನುಷ್ಯತ್ವವನ್ನು ಮುನಿರತ್ನ ಅವರಲ್ಲಿ ಕಾಣಲಿಕೆ ಸಾಧ್ಯವಿಲ್ಲ .ಮೃಗಗಳಿಗೆ ಇರುವಂತ ಬುದ್ದಿ ಇರುವ ಮನುಷ್ಯ. ಮುನಿರತ್ನ ಪರ ವಹಿಸಿಕೊಂಡು ಮಾತನಾಡುವ ಘನತೆಗೆ ದಕ್ಕೆ ಬರುವಂತಹದ್ದು . ಮುನಿರತ್ನಗೆ ಕಾನೂನು ರೀತಿ ಶಿಕ್ಷೆ ಯಾಗಬೇಕು ಎಂದರು. ಮುನಿರತ್ನ ಯಾವ ಕೆಳಮಟ್ಟದ ಇಳಿದಿದ್ದಾರೆ ಎಂಬುದು ಇನ್ನು ಬೆಳಕಿಗೆ ಬರುತ್ತೆ. ಮುನಿರತ್ನ ಪ್ರಕರಣ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.