Uncategorized

ನಾನು ವಿಷಾದ ವ್ಯಕ್ತಪಡಿಸಲ್ಲಾ: ರಮೇಶ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿದ್ದು ಆ ಇಬ್ಬರು ನಾಯಕರು: ಶಾಸಕ ಯತ್ನಾಳ ಸ್ಪಷ್ಟನೆ

Share

ವಿಜಯಪುರ: ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ವಿರುದ್ಧದ ಹೇಳಿಕೆಯನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಮರ್ಥಿಸಿಕೊಂಡಿದ್ದಾರೆ. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಅಹಿಂದ ನಾಯಕರು, ಹಿಂದ ನಾಯಕರ ಕೆಲಸ ಏನಿದೆ ಎಂದು ಕಿಡಿಕಾರಿದರು. ಅಲ್ಲದೇ, ಇವರಿಗೆ ಸ್ವಾಭಿಮಾನ ಅಂಬೇಡ್ಕರ್ ಬಗ್ಗೆ ಗೌರವವಿದ್ದರೆ ಟಿಪ್ಪು ಸುಲ್ತಾನ್ ಔರಂಗಜೇಬ್ ‌ಗಾಗಲಿ ಎಷ್ಟು ಬೈಯ್ದರೂ ಕ್ಷಮೆ ಕೇಳಲ್ಲಾ. ನಾನು ವಿಷಾದ ವ್ಯಕ್ತಪಡಿಸಲ್ಲ ಎಂದರು. ಪೊಲೀಸರ ಮೇಲೆ ಒತ್ತಡ ಇರುವ ಕಾರಣ ನನ್ನ ಮೇಲೆ ಸ್ವಮೋಟೋ ಕೇಸ್ ಹಾಕಿದ್ದಾರೆ.

ತಪ್ಪೇನಿದ್ದರು ಅಲ್ಲಿಯ ಸಚಿವರದ್ದು ಎಂದು ವಾಗ್ದಾಳಿ ನಡೆಸಿದರು. ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡುವಿನ ಸಂಧಾನ ನಡೆದ ಕುರಿತು ಪ್ರತಿಕ್ರಿಯಿಸಿ ಅಲ್ಲಿ ನಡೆದದ್ದು ಸಂಧಾನವಲ್ಲಾ, ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ನಡೆದಿದೆ. ಹನಿಟ್ರ್ಯಾಪ್ ಅಲ್ಲಾ, ಅದು ಸಮ್ಮತಿ ಮೇರೆಗೆ ಆಗಿದ್ದನ್ನು ಅತ್ಯಾಚಾರ ಬಿಂಬಿಸಿ ಅಪಮಾನ ಮಾಡಿದ್ದು ರಮೇಶ ಜಾರಕಿಹೊಳಿ ವಿರುದ್ದ ವಿಜಯೇಂದ್ರ ಹಾಗೂ ಡಿಕೆ ಶಿವಕುಮಾರ ಇವರಿಬ್ಬರು ಸಿಡಿ‌ಯನ್ನು ಬಿಡುಗಡೆ ಮಾಡಿದ್ದಾರೆ ಎಂಬ ಸಿಟ್ಟಿದೆ. ಮಾಜಿ ಸಚಿಚ ರಮೇಶ ಜಾರಕಿಹೊಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ದರಿದ್ದಿವಿ ಎಂದರು.

Tags:

error: Content is protected !!