hubbali

ಹುಬ್ಬಳ್ಳಿ ಸಬ್ ಜೈಲಿಗೆ ಕಮಿಷನರ್ ಎನ್ ಶಶಿಕುಮಾರ್ ರೈಡ್ : ಜೈಲಿನಲ್ಲಿಯೂ ರೌಡಿಗಳಿಗೆ ಬೆವರಿಳಿಸಿದ ಕಮಿಷನರ್

Share

ಇಷ್ಟು ದಿನಗಳ ಕಾಲ ಅವಳಿ ನಗರದಲ್ಲಿ ಬಾಲ ಬಿಚ್ಚಿದ್ದ ಡ್ರಗ್ಸ್ ಪೆಡಲರ್ಸ್, ಮೀಟರ್ ಬಡ್ಡಿ ದಂದೇ ಕೋರರು, ಏರಿಯಾದಲ್ಲಿ ಹವಾ ಮೆಂಟೇನ್,ಹಾಗೂ ಬೇರೆ ರಾಜ್ಯದಿಂದ ಬಂದು ಅವಳಿ ನಗರದಲ್ಲಿ ಬಂಗಾರದ ಅಂಗಡಿಗಳನ್ನು ಕಳ್ಳತನ ಮಾಡಿದ್ದ ನಟೋರಿಯಸ್ ಗಳನ್ನು ಕಮಿಷನರ್ ಎನ್ ಶಶಿಕುಮಾರ್ ಗುಂಡೇಟು ಕೊಟ್ಟು ಜೈಲಿಗೆ ಅಟ್ಟಿದ್ದು ನೆನೆಪಿದೆ,ಆದ್ರೆ ಇದೀಗ ಜೈಲಿಗೆ ಅವರನ್ನು ಅಟ್ಟಿದರು ಕೂಡಾ ಕಮಿಷನರ್ ರೌಡಿ ಶೀಟರ್ ಗಳಿಗೆ ಜೈಲಿನಲ್ಲಿಯೂ ಕೂಡಾ ಬಿಸಿ ಮುಟ್ಟಿಸುವ ಕಾರ್ಯವನ್ನು ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಅವಳಿ ನಗರದಲ್ಲಿ ಹದಿಗೆಟ್ಟು ಹೋಗಿದ್ದ ಕಾನೂನು ಸುವ್ಯವಸ್ಥೆಯನ್ನು ತರುವ ನಿಟ್ಟಿನಲ್ಲಿ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾರ್ಗದರ್ಶನದಲ್ಲಿ ಕಮಿಷನರೇಟ್’ನ ಪೊಲೀಸರು ಹಗಲು ರಾತ್ರಿ ಎನ್ನದೇ 2 ತಿಂಗಳ ಕಾಲ ಕಾರ್ಯಾಚರಣೆ ನಡೆಸಿ ಸುಮಾರು ಮುನ್ನರಕ್ಕೂ ಹೆಚ್ಚು ಆರೋಪಿಗಳನ್ನು ಜೈಲಿಗೆ ಅಟ್ಟಿ ಅವರ ಪುಂಡಾಟಿಕೆಯನ್ನು ಕಡಿವಾಣ ಹಾಕಿದ್ದರು.ಆದ್ರೆ ಇಷ್ಟಕ್ಕೆ ಬಿಡದೇ ಇಂದು ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಜೈಲು ಪಾಲಾದ ಕ್ರಿಮಿನಲ್ಸ್ ಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಕಮಿಷನರ್ ಎನ್ ಶಶಿಕುಮಾರ್ ನೇತೃತ್ವದಲ್ಲಿ ಡಿಸಿಪಿ,ಎಸಿಪಿ ಇಂದು ಸಾಯಂಕಾಲ 4.30 ರ ಸುಮಾರಿಗೆ ಹುಬ್ಬಳ್ಳಿಯ ಸಬ್ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ,ಜೈಲಿಗೆ ಸೇರಿದ್ರು ಕೆಲವೊಂದಿಷ್ಟು ರೌಡಿ ಶೀಟರ್’ಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದು ಹೀಗಾಗಿ ಅವರಿಗೆ ಬಿಸಿ ಮುಟ್ಟಿಸುವ ಸಲುವಾಗಿ ಈ ದಾಳಿ ಮಾಡಲಾಗಿದೆ ಅಂತಾ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದು ಹೀಗೆ. ಇಷ್ಟು ದಿನಗಳ ಕಾಲ ಕ್ರೈಂ ಚಟುವಟಿಕೆಯಲ್ಲಿ ಭಾಗಿಯಾಗಿ ಜೈಲು ಪಾಲಾಗಿ ಅಲ್ಲಾದ್ರೂ ಕೂಡಾ ಆರಾಮಾಗಿ ಜೈಲಿನಲ್ಲಿ ಇರಬೇಕು ಎಂದಿದ್ದ,ಕ್ರಿಮಿನಲ್ ಗಳಿಗೆ ಜೈಲಿನಲ್ಲಿಯೂ ಕೂಡಾ ಕಮಿಷನರ್ ಬೇವರು ಇಳಿಸಿದ್ದಾರೆ.

Tags:

error: Content is protected !!