ಖಾನಾಪೂರ ತಾಲೂಕಿನ ಭೀಮಗಡ ಅಭಿಯಾರಣ್ಯದ ಕಾಡಂಚಿನ ಭಾಗದಲ್ಲಿ ಜನರು ಮೂಲಭೂತ ಅಗತ್ಯವಾದ ರಸ್ತೆ ಸಂಪರ್ಕದಿಂದಲೂ ವಂಚಿತರಾಗಿದ್ದಾರೆ.
ಬೆಳಗಾವಿ ತಾಲೂಕಿನ ಭೀಮಗಡ ಅಭಯಾರಣ್ಯದ ಗವಾಲಿ ಗ್ರಾಮದ ಗ್ರಾಮಸ್ಥರ ಪರಿಸ್ಥಿತಿ ಹೇಳತೀರದು , ಗ್ರಾಮವು ಮಳೆಗಾಲದಲ್ಲಿ ದ್ವೀಪದಂತೆ ಕಾಣುತ್ತದೆ , ಗ್ರಾಮಕ್ಕೆ ಹೋಗಲು ಸರಿಯಾದ ರಸ್ತೆಗಳು ಇಲ್ಲವೆಲ್ಲದೆ ಜನರು ಪರದಾಟ ನಡೆಸುತ್ತೀದ್ದಾರೆ , ವನ್ಯಜೀವಿಗಳ ಹಾವಳಿ ಕೂಡ ಹೆಚ್ಚಾಗಿದೆ , ರೈತರು ಸಾಗುವಳಿ ಮಾಡುತ್ತಿರುವ ಜಮೀನುಗಳು ಮಳೆಗೆ ಹಾನಿಯಾಗುತ್ತೀವೆ ,ಗ್ರಾಮದಿಂದ ಗ್ರಾಮಕ್ಕೆ ಹೋಗುಲು ಸಂಪರ್ಕ ರಸ್ತೆ ಇಲ್ಲದೆ ಪರದಾಟ ನಡೆಸುವ ಸ್ಥಿತಿ ಪ್ರತಿವರ್ಷ ಬರುತ್ತೇದೆ ,ಜನ ಪ್ರತಿನಿಧಿಗಳು ಯಾರೂ ಇತ್ತ ಗಮನ ಹರಿಸುತ್ತಿಲ್ಲ
ಅರಣ್ಯ ಇಲಾಖೆ ರಸ್ತೆ, ಸೇತುವೆ ನಿರ್ಮಾಣಕ್ಕೆ ಅವಕಾಶ ನೀಡದ ಕಾರಣ ಈ ಭಾಗದಲ್ಲಿ ಹೆಚ್ಚಿನ ಸಮಸ್ಯೆಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳು ತುಂಬುತ್ತಿದ್ದರೂ ಈ ಪ್ರದೇಶಕ್ಕೆ ಮೂಲ ಸೌಕರ್ಯ ಸಿಕ್ಕಿಲ್ಲ. ಈ ಭಾಗದ ರೈತರನ್ನು ಹೈರಾಣಾಗಿಸಿದೆ.