Uncategorized

ಹೃದಯಾಘಾತಕ್ಕೆ ಪೈಲ್ವಾನ್ ಸಾವು..!

Share

ಭಾರ ಎತ್ತು ಸ್ಪರ್ಧೆಯಲ್ಲಿ ಸಾಧನೆ ಮಾಡಿ ಮನೆಮಾತಾಗಿದ್ದ ಪೈಲ್ವಾನ್ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.‌ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಶ್ರೀಕಾಂತ ನಾಯಕ್ ಸಾವನ್ನಪ್ಪಿದ ಪೈಲ್ವಾನ್. 32 ವರ್ಷದ ಶ್ರೀಕಾಂತ ಕಳೆದ 18 ವರ್ಷಗಳಿಂದ ಭಾರ ಎತ್ತುವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತ ಸಾಧನೆ ಮಾಡಿದ್ದ. 240 ಕೆ‌‌.ಜಿ ಭಾರ ಎತ್ತಿ ಸಾಧನೆ ಮಾಡಿದ್ದ.

ಬೆಳ್ಳಿ ಗಧೆ, ಬೆಳ್ಳಿ ಕಡಗಗಳನ್ನ ಗೆದ್ದು ವಿಜಯಪುರ, ಬಾಗಲಕೋಟೆ, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಗಳಲ್ಲಿ ಹೆಸರು ಮಾಡಿದ್ದ ಶ್ರೀಕಾಂತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಇಂದು ಬೆಳಿಗ್ಗೆ ಎದೆ ಹಾಗೂ ಬೆನ್ನಲ್ಲಿ ನೋವು ಕಾಣಿಸಿಕೊಂಡು, ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಚಿಕಿತ್ಸೆ ಫಲಿಸದೆ ಪೈಲ್ವಾನ್ ಶ್ರೀಕಾಂತ ಸಾವನ್ನಪ್ಪಿದ್ದಾನೆ. ಪೈಲ್ವಾನ್ ಸಾವಿಗೆ ಕ್ರೀಡಾಪ್ರೇಮಿಗಳು ಸಂತಾಪ ವ್ಯಕ್ತ ಪಡೆಸಿದ್ದಾರೆ‌..

Tags:

error: Content is protected !!