ಪ್ರತ್ಯೇಕ ಎರಡು ನಕಲಿ ದಾಖಲೆ ಸೃಷ್ಟಿಸಿ ಭೂ ಹಗರಣದಲ್ಲಿ ಏಳು ಆರೋಪಿಗಳನ್ನು ವಿಜಯಪುರದಲ್ಲಿ ಬಂಧಿಸಲಾಗಿದೆ
ಬಾಪು ಕ್ಷೀರಸಾಗರ, ಪ್ರಕಾಶ ಐವಳ್ಳಿ, ದಾದಾ ಐಹೊಳ್ಳಿ, ಗಣೇಶ ದೇವಕುಳೆ, ಯೋಗೇಶ ಕಾಂಬ್ಳೆ, ಭಾರತ ಕಾಂಬ್ಳೆ, ಸುಭಾಷ್ ಮಾನೆ ಬಂಧಿತ ಆರೋಪಿಗಳು. ಆರೋಪಿಗಳು ಗೋವಾ, ಮಹಾರಾಷ್ಟ್ರ, ವಿಜಯಪುರ ನಿವಾಸಿಗಳಾಗಿದ್ದಾರೆ. ಬಂಧಿತರಿಂದ 24.50 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಮುಂಬೈ ನಿವಾಸಿ, ವಿಜಯಪುರ ನಗರ ನಿವಾಸಿ ನಾರಾಯಣ ಸಾಠೆ, ಅನಿಲ ಮೋಗಲಿ ಹಾಗೂ ಮಾರುತಿ ನಾರಾಯಣಕರಗೆ ವಂಚನೆ ಮಾಡಿದ್ದರು. ಸಿಇಎನ್ ಪೊಲೀಸರ ಭರ್ಜರಿ ಭೇಟೆಗೆ ಆರೋಪಿಗಳು ಲಾಕ್ ಆಗಿದ್ದಾರೆ. ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.