ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರದ ಬಜೆಟ್ ಭವಿಷ್ಯದ ಭಾರತದ ಬಜೆಟ್ ಆಗಿದೆ ಎಂದು ಶಾಸಕ ಅಭಯ್ ಪಾಟೀಲ್ ಹೇಳಿದ್ದರು .
ಕೇಂದ್ರ ಸರ್ಕಾರ 2024-25 ನೇ ಸಾಲಿನ ಬಜೆಟ್ ಸಂಪೂರ್ಣ ಸಾರ್ವಜನಿಕರ ಪರವಾಗಿದೆ. ಜನಸಾಮಾನ್ಯರಿಗೆ ಅವಶ್ಯಕ ಇರುವ ಮೂಲಸೌಲಭ್ಯ, ಶಿಕ್ಷಣ, ಕೃಷಿ, ಆರೋಗ್ಯ ಅದರಲ್ಲೂ ವಿಶೇಷವಾಗಿ ಮಧ್ಯಮ ವರ್ಗದ ಬಾಂಧವರನ್ನು ಕೇಂದ್ರೀಕರಿಸಿದ್ದು ಅವರಿಗೆ ಸಹಕಾರಿಯಾಗುವ ಹಾಗೂ ಯುವ ಜನತೆ ಮತ್ತು ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಜನಪರ ಬಜೆಟ್ ಇದಾಗಿದೆ.ಎಂದರು .