ಅಥಣಿ : ಅಸ್ವಚ್ಛತೆಯ ಚರಂಡಿ, ಕೆಸರು ಗದ್ದೆಯಂತಾದ ರಸ್ತೆಗಳು, ಗ್ರಾಮದಲ್ಲಿ ಸೊಳ್ಳೆಗಳ ಕಾಟ,ಮೇಲೆ ಡೆಂಗ್ಯೂ
ಮಹಾಮಾರಿಯ ಭಯದಲ್ಲೆ ಕಾಲ ಕಳೆಯುತ್ತಿರುವ ಜನ.
ಈ ಎಲ್ಲಾ ದೃಶ್ಯ ಕಂಡಿದ್ದು ಅಥಣಿ ತಾಲೂಕಿನ ಸತ್ತಿ ಅನ್ನೋ ಗ್ರಾಮದಲ್ಲಿ. ರಾಜ್ಯದಲ್ಲಿ ಡೆಂಗ್ಯೂ ಮಹಾಮಾರಿ ಕೆ ಕೆ ಹಾಕುತ್ತಿದ್ದರು ಗ್ರಾಮೀಣ ಪ್ರದೇಶದಲ್ಲಿ ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳ ಅಸಡ್ಡೆತನದಿಂದ ಜನರು ಚಳಿ ಜ್ವರ ಭೀತಿಯಿಂದ ಆಸ್ಪತ್ರೆ ಮುಂದೆ ಕ್ಯೂ ನಿಲ್ಲುವಂತಾಗಿದೆ. ಸತ್ತಿ ಗ್ರಾಮದ ಪ್ರಮುಖ ರಸ್ತೆ ಹಾಗೂ ಚರಂಡಿಗೆ ಅವ್ಯವಸ್ಥೆಯಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಗ್ರಾಮಸ್ಥರು ಡೆಂಗ್ಯೂ ಭೀತಿಯಲ್ಲಿ ಕಾಲಕಳೆಯುವಂತಾಗಿದೆ.

ಅಭಿವೃದ್ಧಿ ಅಧಿಕಾರಿ ಮುತ್ತುರಾಜ ಗುರವ ಅವರಿಗೆ ಸ್ಥಳೀಯರು ಮನವಿ ಮಾಡಿದರು ಕಿವಿಗೋಡದೆ ನಿರ್ಲಕ್ಷ ತೋರುತ್ತಿದ್ದಾರೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಮೊದಲೆ ನದಿ ತೀರದ ಗ್ರಾಮವಾದ ಸತ್ತಿ ಗ್ರಾಮಸ್ಥರಿಗೆ ನೆರೆ ಹಾವಳಿ ಭೀತಿ ಒಂದೆಡೆಯಾದರೆ ಡೆಂಗ್ಯೂ ಮಹಾಮಾರಿ ಆತಂಕ ಕಾಡುತ್ತಿದೆ ಮೇಲಧಿಕಾರಿಗಳು ಕೂಡಲೆ ಗಮನ ಹರಿಸಿ ಗ್ರಾಮದಲ್ಲಿ ಸ್ವಚ್ಛತೆ ಕಡೆಗೆ ಗಮನಹರಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.