Belagavi

ಬೆಳಗಾವಿ ಬಂದ ಅಪ್ಪು ಅಭಿಮಾನಿ… ಸೈಕ್ಲಿಂಗ್ ಮೂಲಕ ದೇಶವಿದೇಶ ಸುತ್ತಿ ನೀಡಿದ ಪರಿಸರ ಸಂರಕ್ಷಣೆಯ ಸಂದೇಶ…!

Share

ದೊಡ್ಮನೆಯ ಚಿಕ್ಕ ಹುಡುಗ ಇಂದು ನಮ್ಮ ಮಧ್ಯದಲ್ಲಿಲ್ಲ. ಆದರೇ ಅಪ್ಪು ಅಭಿಮಾನಿಗಳಲ್ಲಿ ಅವರ ನೆನಪು ಸದಾ ಹಚ್ಚಹಸಿರಾಗಿದೆ. ಅವರು ಮಾಡಿದ ಸಾಮಾಜಿಕ ಕಾರ್ಯ ಇಂದಿಗೂ ಜನಮಾನಸದಲ್ಲಿ ಜೀವಂತವಾಗಿವೇ ಇಲ್ಲೊಬ್ಬ ಪುನೀತ್ ರಾಜಕುಮಾರ್ ಹಾರ್ಡಕೋರ್ ಅಭಿಮಾನಿ ಸುಮಾರು 3 ವರ್ಷ ಸೈಕ್ಲಿಂಗ್ ಮೂಲಕ ದೇಶ ವಿದೇಶ ಸುತ್ತಿ, ಅಪ್ಪು ಕೀರ್ತಿಯನ್ನು ಪಸರಿಸಿ ಪ್ರಕೃತಿ ಉಳಿಸುವ ಸಂದೇಶ ನೀಡುತ್ತ ವಿನೂತನವಾಗಿ ಪುನೀತ್ ರಾಜಕುಮಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾನೆ. ಯಾರು ಈ ಅಭಿಮಾನಿ ಅಂತೀರಾ ?? ಹಾಗಾದ್ರೇ ಈ ಇಂರ್ಟೆಸ್ಟಿಂಗ್ ಸ್ಟೋರಿ ನೋಡಿ.

2 ವರ್ಷಗಳಿಂದ ಪ್ರಪಂಚ ಪರ್ಯಟನೆ… ಅಪ್ಪು ಕೀರ್ತಿಯನ್ನು ದೇಶ-ವಿದೇಶಕ್ಕೆ ಸಾರುತ್ತಿರುವ ಅಭಿಮಾನಿ…ಪರಿಸರ ರಕ್ಷಣೆಯ ಜೊತೆ ಅಪ್ಪು ಆದರ್ಶಗಳ ಗುಣಗಾನ ಅಪ್ಪು ಕೇವಲ ಕನ್ನಡಿಗರ ಸೂಪರಸ್ಟಾರ್ ಎಂದು ನೀವೆಂದುಕೊಂಡಿದ್ದರೇ, ನಿಮ್ಮ ವಿಚಾರ ತಪ್ಪು. ಏಕೆಂದರೇ ಅನ್ಯ ಭಾಷೆಗಳಲ್ಲಿಯೂ ಅಪ್ಪು ಅಭಿಮಾನಿಗಳಿಗೆ ಕಡಿಮೆಯಿಲ್ಲ. ಇದಕ್ಕೆ ಉದಾಹರಣೆ ಅಪ್ಪುವಿನ ಈ ಹಾರ್ಡಕೋರ ಫ್ಯಾನ್… ಹೌದು, ಇತನ ಹೆಸರು ಮುತ್ತು ಸಲ್ವನ್. ತಮಿಳುನಾಡು ಮೂಲದ ಮುತ್ತು, ಮುತ್ತುರಾಜರ ಮಗನ ಬಹುದೊಡ್ಡ ಅಭಿಮಾನಿ. ಪುನೀತ್ ರಾಜಕುಮಾರ ಕೇವಲ ಓರ್ವ ನಟನಾಗಿರದೇ ಒಬ್ಬ ಒಳ್ಳೆಯ ಸಾಮಾಜಿಕ ಕಾರ್ಯಕರ್ತರು ಕೂಡ ಆಗಿದ್ದರು. ಅವರ ಆದರ್ಶ, ತತ್ವವಿಚಾರಗಳು ಸದಾ ಹಚ್ಚ ಹಸಿರಾಗಿರಬೇಕು ಎಂಬ ಮಹದಾಸೆಯಿಂದ ಸುಮಾರು 5 ಲಕ್ಷ ಸಸಿಗಳನ್ನು ನೆಡುವ ಧ್ಯೆಯದೊಂದಿಗೆ, 3 ವರ್ಷ 4 ದೇಶ 1111 ದಿನಗಳ ಕಾಲ 36,300 ಕಿಮೀ ಪ್ರಯಾಣ ಕೈಗೊಂಡಿದ್ದಾರೆ.


ಈಗಾಗಲೇ 21 ಡಿಸೆಂಬರ್ 2021 ರಿಂದ ಇವರ ಪ್ರಯಾಣ ಆರಂಭಗೊಂಡಿದ್ದು 2 ವರ್ಷ 5 ತಿಂಗಳು ಪೂರ್ಣಗೊಂಡಿವೆ, ತಮಿಳುನಾಡು, ಲಡಾಕ್ ಮಧ್ಯಪ್ರದೇಶ , ಜಮ್ಮು ಕಾರ್ಗಿಲ್, ಅಸ್ಸಾಂ ವರೆಗೂ ಇವರ ಪರ್ಯಟನೆ ಪೂರ್ಣಗೊಂಡಿದ್ದು ಇಲ್ಲಿಯ ವರೆಗೂ 19 ರಾಜ್ಯ 452 ಜಿಲ್ಲೆ, 2680 ತಾಲೂಕುಗಳಲ್ಲಿ ಸಂಚರಿಸಿ 3,55 ಸಾವಿರ ಸಸಿಗಳನ್ನು ನೆಟ್ಟಿದ್ದಾರೆ. ಇನ್ನು ಪಾಂಡಿಚೇರಿ, ನೇಪಾಳ, ವೇರ್ಣಾ, ಬ್ಯಾಂಕಾಕ್, ಬಾಂಗ್ಲಾದೇಶ, ದೆಹಲಿಯ ಪ್ರವಾಸದ ಬಳಿಕ ಜನವರಿ 15ರಂದು ಅಪ್ಪು ಸಮಾಧಿ ದರ್ಶನ ಪಡೆದು ಇವರ ಪ್ರಪಂಚ ಪರ್ಯಟನೆ ಮುಕ್ತಾಯವಾಗಲಿದೆ.

ಇಂದು ಬೆಳಗಾವಿಗೆ ಆಗಮಿಸಿದ್ದ ಈ ಅಪ್ಪು ಅಭಿಮಾನಿ ಜಿಲ್ಲಾ ಪೊಲೀಸ್ ವರಿಷ್ಠ ಡಾ.ಭೀಮಾ ಶಂಕರ ಗುಳೇದ ಮತ್ತು ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರನ್ನು ಭೇಟಿಯಾದ. ಈ ವೇಳೆ ಅಪ್ಪು ಅಭಿಮಾನಿಯನ್ನು ಸ್ವಾಗತಿಸಿ ಆತನ ಮುಂದಿನ ಪ್ರಯಾಣಕ್ಕೆ ಶುಭಹಾರೈಸಲಾಯಿತು.
ನಟ ಪುನೀತರಾಜಕುಮಾರ ಅವರ ಆದರ್ಶಗಳನ್ನು ದೇಶ-ವಿದೇಶಗಳಲ್ಲಿ ಭಿತ್ತರಿಸಿ ಪರಿಸರ ಸಂರಕ್ಷಣೆಯ ಸಂದೇಶ ನೀಡುತ್ತಿರುವ ಈ ಅಪ್ಪು ಅಭಿಮಾನಿಗೆ ನಮ್ಮದೊಂದು ಸಲಾಮ್.

Tags:

error: Content is protected !!