ಸರ್ಕಾರಿ ಬಸ್ ವೊಂದು ಕುರಿಗಾಹಿ ಹಾಗೂ ಕುರಿಗಳ ಹಿಂಡಿನ ಮೇಲೆ ಹರಿದಿದ್ದು, ಸ್ಥಳದಲ್ಲೇ ಕುರಿಗಾಹಿ ಹಾಗೂ 21 ಕುರಿಗಳು ಸಾವನ್ನಪ್ಪಿರುವ ದಾರುಣ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ ತಾಲೂಕಿನ ಈರಜ್ಜನಹಟ್ಟಿಯಲ್ಲಿ ಈ ದುರಂತ ಸಂಭವಿಸಿದೆ. ನೆಲಗೇತನಹಟ್ಟಿಯ ಕುರಿಗಾಹಿ ರಾಜಪ್ಪ (30) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಮತ್ತೋರ್ವ ಕುರಿಗಾಹಿ ತಿಪ್ಪಣ್ಣ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುರಿ ಮೇಯಿಸಲು ನೇಲಗತಿನಹಟ್ಟಿ ಗ್ರಾಮದಿಂದ ಚನ್ನಗಿರಿಗೆ ತೆರಳಿದ್ದರು, ಈ ವೇಳೆ ಮಳೆ ಬಂದ ಕಾರಣ ಸ್ವ- ಗ್ರಾಮಕ್ಕೆ ಮರಳುತ್ತಿದ್ದಾಗ ಬಸ್ ಹರಿದಿದೆ. ಪರಿಣಾಮ 2 ಲಕ್ಷಕ್ಕೂ ಹೆಚ್ಚು ಮೌಲ್ಯದ 21 ಕುರಿಗಳ ಸಾವನ್ನಪ್ಪಿದ್ದು, ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
