ಬೀದರ ಸಿದ್ಧಾರೂಢ ಮಠದ ಸೋತ್ರಿಯ ಬ್ರಹ್ಮನಿಷ್ಠ ಡಾಕ್ಟರ್ ಶಿವಕುಮಾರ ಮಹಾಸ್ವಾಮಿಗಳವರ 80ನೆಯ ಜಯಂತಿ ಮಹಾಮಹೋತ್ಸವ ಸಹಸ್ರಚಂದ್ರ ದರ್ಶನದ ಕಾರ್ಯಕ್ರಮ ಇವತ್ತು ಆರಂಭಗೊಂಡಿತು ಮುಂಜಾನೆ ಇಂಚಲದ ಡಾ. ಶಿವಾನಂದ ಭಾರತೀ ಅಪ್ಪಗಳ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಶಿವಕುಮಾರ ಮಹಾಸ್ವಾಮಿಗಳಿಗೆ ವಿಶೇಷವಾಗಿ ಮಸ್ತಕಾಭಿಷೇಕ ಜರುಗಿತು.
ನಂತರ ಶಿವಕುಮಾರ ಮಹಾಸ್ವಾಮಿಗಳವರ ಶಿವಾನಂದ ಭಾರತೀಯ ಪಗಳ ಪಾದಪೂಜೆ ಮತ್ತು ಕಿರೀಟ ಪೂಜೆ ಅದ್ಭುತವಾಗಿ ಜರುಗಿತು. ಕಾಶಿ ಜಗದ್ಗುರು ಡಾಕ್ಟರ್ ಚಂದ್ರಶೇಖರ ಶಿವಾಚಾರ್ಯ ಭಗವತ್ಪಾಧರ ಸಾರೋಟ ಮೆರವಣಿಗೆ ಹಾಗೂ ಉಭಯ ಶ್ರೀ ಗಳ ಸಾರೋಟ ಮೆರವಣಿಗೆ ಮಹಾತ್ಮರ ಉತ್ಸವ ಶೋಭಾಯಾತ್ರೆ ವಿಶಿಷ್ಟವಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ವೀರಶೈವ ಧರ್ಮದಲ್ಲಿ ಪಂಚಪೀಠಗಳು ಇಡೀ ಸಮುದಾಯಕ್ಕೆ ಆಶೀರ್ವದಿಸುತ್ತಿದೆ ಶ್ರೀ ಮದ್ ರಂಭಾಪುರಿ,ಉಜ್ಜಯನಿ, ಕೇದಾರ,ಶ್ರೀ ಶೈಲ, ಕಾಶಿ ಹಾಗೆ ಅದ್ವೈತ ಪರಂಪರೆಯಲ್ಲಿ ಈ ಶಿವತ್ರೇಯರು ಬೀದರನ ಶಿವಕುಮಾರ್ ಮಹಾಸ್ವಾಮಿಗಳು, ಇಂಚಲದ ಶಿವಾನಂದ ಭಾರತಿ ಅಪ್ಪಗಳು ಅಭಿನವ ಶಿವಪುತ್ರ ಮಹಾಸ್ವಾಮಿಗಳು ಹೋದಲ್ಲೆಲ್ಲ ಅದ್ಭುತವಾದ ಕ್ರಾಂತಿಯನ್ನು ಮಾಡಿದ್ದಾರೆ ಇವತ್ತು ಅದ್ಧೂರಿಯಾಗಿ ಕಾರ್ಯಕ್ರಮ ಜರುಗಿದೆ ನಮಗಂತೂ ತುಂಬಾ ಸಂತೋಷವಾಗಿದೆ ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು