ಚಿಕ್ಕೋಡಿ : ನಿಪ್ಪಾಣಿ ಪೊಲೀಸರು ಬುಧವಾರ ನಗರದಲ್ಲಿ ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಅಕ್ಷಯ ಅನೀಲ ಕಾಂಬಳೆ (25) ಯುವಕನನ್ನು బంధిసి ಆತನಿಂದ 430 ಗ್ರಾಂ ಗಾಂಜಾ ಹಾಗೂ ಅಂದಾಜು 1.50 ಲಕ್ಷ ಮೌಲ್ಯದ ದ್ವಿಚಕ್ರ ವಾಹನ ಹೀಗೆ ಒಟ್ಟು 1.75 ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ.
ಸಮೀಪದ ಮಹಾರಾಷ್ಟ್ರದ ಕೋಲ್ಲಾಪುರದಿಂದ ನಿಪ್ಪಾಣಿಗೆ ಯುವಕನೊಬ್ಬ ಗಾಂಜಾ ಮಾರಾಟ ಮಾಡಲು ಬರುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಆಧಾರದ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ಬಸ್ ನಿಲ್ದಾಣ ಹತ್ತಿರದ ಗ್ರೀನ್ ಪಾರ್ಕ್ ಸಮೀಪ ಯುವಕನನ್ನು ಬಂಧಿಸಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಸಿಪಿಐ ಬಿ.ಎಸ್. ತಳವಾರ ಅವರ ಮುಂದಾಳತ್ವದಲ್ಲಿ ಸಿಬ್ಬಂದಿಗಳಾದ ಎಸ್. ಎಸ್ ಸಾರವಾಡ, ಶೇಖರ ಅಸೋದೆ, ಗೋಪಾಲ ಬಡಿಗೇರ, ಸುದರ್ಶನ ಅಸ್ಕಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು