Bidar

ಬೀದರ್‌ನಲ್ಲಿ ಲೋಕಾ ದಾಳಿ – ಬೆಳ್ಳಂಬೆಳಗ್ಗೆ ಅರಣ್ಯ ಅಧಿಕಾರಿಗೆ ಶಾಕ್‌

Share

ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೀದರ್‌ನಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗೆ ಶಾಕ್ ನೀಡಿದ್ದಾರೆ.

ಬೀದರ್ ನಗರದ ಕೆಇಬಿ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ಆರ್‌ಎಫ್‌ಓ ಬಸವರಾಜ್‌ ಡಾಂ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಒಂದು ವರ್ಷದಿಂದ ಬೀದರ್‌ ಅರಣ್ಯ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಆರ್‌ಎಫ್‌ಒ ಆಗಿ ಕಾರ್ಯನಿರ್ವಸುತ್ತಿರುವ ಬಸವರಾಜ ಮೇಲೆ ಅಕ್ರಮ ಆಸ್ತಿಗಳಿಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ

ಇನ್ನು ಮನೆಯಲ್ಲಿ ಅಪಾರ ಪ್ರಮಾಣದ ಆಭರಣ ಪತ್ತೆಯಾಗಿದ್ದು, ರಿವಾಲ್ವಾರ್, ಮದ್ಯದ ಬಾಟಲಿಗಳೂ ರೇಡ್ ವೇಳೆ ಪತ್ತೆಯಾಗಿವೆ. ಕಲಬುರಗಿಯಲ್ಲಿರುವ ಬಸವರಾಜ್‌ ಡಾಂಗೆ ಮನೆಯಲ್ಲಿ ಪತ್ತೆ ನಡೆದಿದ್ದು,. ಕೋಟಿ-ಕೋಟಿ ಬೆಲೆ ಬಾಳುವ ಆಸ್ತಿ ಸಂಬಂಧದ ದಾಖಲೆಗಳನ್ನು ಲೋಕಾ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಮಾಕಾ ಲೇಔಟ್‌ನಲ್ಲಿ ಕೋಟಿ ಬೆಲೆ ಬಾಳು ಎರಡು ಅಂತಸ್ತಿನ ಬಂಗಲೆ ಹೊಂದಿದ್ದಾರೆ

ವಿಜಯಪುರ ಜಿಲ್ಲೆ ನಾಗರಹಳ್ಳಿಯಲ್ಲಿ 7 ಎಕರೆ ನೀರಾವರಿ ಜಮೀನು, 300 ಗ್ರಾಂಗೂ ಹೆಚ್ಚು ಚಿನ್ನದ ಆಭರಣ, ಬೆಳ್ಳಿ ಆಭರಣ ಪತ್ತೆಯಾಗಿದೆ. ಕಾಳಗಿ ತಾಲೂಕಿನಲ್ಲಿ ಒಂದೂವರೆ ಎಕರೆ ಭೂಮಿಗೆ ಸಂಬಂಧಿಸಿದ ದಾಖಲೆ ಬೇನಾಮಿ ಹೆಸರಿನಲ್ಲಿ ಕಾರ್ ಸೇರಿ ಹಲವು ವಾಹನಗಳು ಲೋಕಾ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದೇ ವೇಳೆ ಪರವಾನಗಿ ಹೊಂದಿರುವ ಒಂದು ರಿವಾಲ್ವಾರ್ ಪತ್ತೆಯಾಗಿದೆ. ಬಸವರಾಜ್ ಡಾಂಗೆ ಮನೆ ಲೋಕಾ ಟೀಂ ಪರಿಶೀಲನೆ ಮಾಡುತ್ತಿದೆ.

ಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೀದರ್‌ನಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗೆ ಶಾಕ್ ನೀಡಿದ್ದಾರೆ.

ಬೀದರ್ ನಗರದ ಕೆಇಬಿ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ಆರ್‌ಎಫ್‌ಓ ಬಸವರಾಜ್‌ ಕಚೇರಿ ಮೇಲೆ ದಾಳಿ ಮಾಡಲಾಗಿದೆ.

ಒಂದು ವರ್ಷದಿಂದ ಬೀದರ್‌ ಅರಣ್ಯ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಆರ್‌ಎಫ್‌ಒ ಆಗಿ ಕಾರ್ಯನಿರ್ವಸುತ್ತಿರುವ ಬಸವರಾಜ ಮೇಲೆ ಅಕ್ರಮ ಆಸ್ತಿಗಳಿಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ

Tags:

#innewsbelagavi #belgaumnews #belagavi#Farmers #protest #bidar #state #lockyouth #raid
error: Content is protected !!