ವಿಜಯಪುರದಲ್ಲೊಂದು ಸಿನಿಮೀಯ ರೀತಿಯಲ್ಲಿ ಕೊಲೆ ನಡೆದಿದೆ. ಬುಲೆರೊ ಜೀಪ್ ಹತ್ತಿಸಿ ಮಹಿಳೆ ಕೊಲೆ ಮಾಡಲಾಗೊದೆ. ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಜೀಪು ಹತ್ತಿಸಿ ಮಹಿಳೆ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ನಡೆದಿದೆ. ಶೋಭಾ ಸೋಮನಿಂಗ ಮೊಗದರೆ(45) ಕೊಲೆಯಾದ ಮಹಿಳೆಯಾಗಿದ್ದು ಸಾಗರ ಖತಾರ, ಮಾರುತಿ ಥೋರತ ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ.
ತಿಕೋಟಾ ಠಾಣೆ ಪೊಲೀಸರಿಂದ ಆರೋಪಿಗಳ ಬಂಧಿಸಲಾಗಿದೆ. ಕಬ್ಬು ಕಟಾವು ಮಾಡಲು ಗ್ಯಾಂಗ್(ಕಬ್ಬು ಕಟಾವು ಮಾಡುವ ತಂಡ) ತರುತ್ತೇವೆ ಎಂದು ಕೊಲೆಯಾದ ಮಹಿಳೆ ಪತಿ ಸೋಮನಿಂಗನಿಂದ ಹಣ ಪಡೆದಿದ್ದ ಆರೋಪಿಗಳು ಸೋಮನಿಂಗನಿಂದ ಸಾಗರ ಹಾಗೂ ಮಾರುತಿ 45ಲಕ್ಷ ಹಣ ಪಡೆದಿದ್ದರು. ಹಣ ಪಡೆದ ಬಳಿಕ ಗ್ಯಾಂಗ್ ಕಳುಹಿಸಿರಲಿಲ್ಲ, ಈ ವಿಚಾರಕ್ಕೆ ಹಣ ನೀಡಿದ ಸೋಮನಿಂಗನಿಗೂ ಹಾಗೂ ಇಬ್ಬರು ಆರೋಪಿಗಳಿಗೂ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಸೋಮನಿಂಗ ತಾನು ಕೊಟ್ಟ ಹಣ ವಾಪಸ್ ಕೊಡುವಂತೆ ಕೇಳಿದ್ದಾ ಆಗ
ಇದರಿಂದ ಕುಪಿತಗೊಂಡ ಆರೋಪಿಗಳು ಸೋಮ ನಿಂಗ ಇಲ್ಲದ ಸಮಯದಲ್ಲಿ ತೋಟಕ್ಕೆ ಬಂದಿದ್ದರು. ಈ ವೇಳೆ ಜೀಪ್ನಿಂದ ಬೆನ್ನಟ್ಟಿ, ಅಟ್ಟಾಡಿಸಿ ಜೀಪ್ ಹರಿಸಿ ಸೋಮನಿಂಗನ ಪತ್ನಿ ಶೋಭಾಳ ಕೊಲೆ ಮಾಡಿದ್ದಾರೆ. ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.