State

ಸಕಲ ಸರಕಾರಿ ಗೌರವಗಳೊಂದಿಗೆ ಸಂತ ಇಬ್ರಾಹಿಂ ಸುತಾರ್ ಅಂತ್ಯಕ್ರಿಯೆ-ಗೋವಿಂದ ಕಾರಜೋಳ್

Share

ಕನ್ನಡದ ಕಬೀರ, ಸಂತ ಇಬ್ರಾಹಿಂ ಸುತಾರ್‍ರವರ ಅಗಲಿಕೆ ನನಗೆ ತೀವೃ ದುಃಖವನ್ನು ತಂದಿದೆ. ಇನ್ನು ಇಬ್ರಾಹಿಂ ಸುತಾರ್‍ರವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಸಚಿವ ಗೋವಿಂದ್ ಕಾರಜೋಳ್ ಹಳಿದ್ದಾರೆ.

ಈ ಕುರಿತಂತೆ ವಿಡಿಯೋ ಮೂಲಕ ಹೇಳಿಕೆ ನೀಡಿರುವ ಸಚಿವ ಗೋವಿಂದ ಕಾರಜೋಳ್, ನಾಡಿನ ಹೆಸರಾಂತ ಸಂತ, ಪದ್ಮಶ್ರೀ ಪುರಸ್ಕøತ ಇಬ್ರಾಹಿಂ ಸುತಾರ್‍ರವರು ನಮ್ಮನ್ನು ಅಗಲಿರುವುದು ನನಗೆ ತೀವೃ ನೋವನ್ನುಂಟುಮಾಡಿದೆ. ಖ್ಯಾತ ಪ್ರವಚನಕಾರರಾದ ಅವರು ಕೇವಲ ನಾಡಿನಲ್ಲಿ ಅಷ್ಟೇ ಅಲ್ಲದೇ ಮಹಾರಾಷ್ಟ್ರದ ಅನೇಕ ಭಾಗಗಳಲ್ಲಿಯೂ ಕೂಡ ಪ್ರವಚನಗಳನ್ನು ನೀಡಿದ್ದಾರೆ. ಅವರ ಅಗಲಿಕೆ ನನಗೆ ಸಹಿಸಲಾರದ ನೋವನ್ನು ತಂದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹಾಗೆಯೆ ಅವರಿಗೆ ನಮ್ಮ ಸರಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ.

ಇವರ ಅಗಲಿಕೆಯಿಂದ ನಾಡಿನ ಆರುವರೆ ಕೋಟಿ ಜನರಲ್ಲಿ ನೋವನ್ನು ತಂದಿದೆ. ಅವರ ಕುಂಟುಂಬಸ್ಥರ ನೋವಲ್ಲಿ ನಾವೆಲ್ಲ ಪಾಲುದಾರರಾಗಿದ್ದೇವೆ. ಸಕಲ ಸರಕಾರಿ ಗೌರವಗಳೊಂದಿಗೆ ಇಬ್ರಾಹಿಂ ಸುತಾರ್‍ರವರ ಅಂತ್ಯಕ್ರಿಯೆಯನ್ನು ನೆರವೇರಿಸಬೇಕೆಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಸೂಚನೆಯನ್ನು ನೀಡಿದ್ದಾರೆ.

ಈಗಾಗಲೇ ನಾನು ಬಾಗಲಕೋಟ ಜಿಲ್ಲಾಧಿಕಾರಿಗಳು ಹಾಗೂ ಎಸ್‍ಪಿ, ಎಸಿ, ರವರಿಗೆ ಸೂಚನೆಯನ್ನು ನೀಡಿದ್ದೇನೆ. ನನಗೆ ಹುಷಾರಿಲ್ಲದ ಕಾರಣ ನನಗೆ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಆಗುವುದಿಲ್ಲ. ಆದರೆ ಅವರ ಕುಂಟುಂಬಸ್ಥರು, ಅಭಿಮಾನಿಗಳಿಗಾದ ನೋವಿನಲ್ಲಿ ನಾನೂ ಕೂಡ ಪಾಲುದಾರನಿದ್ದೇನೆ. ಇನ್ನು ದೇವರು ಸುತಾರ್‍ರವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.

Tags:

error: Content is protected !!