Chikkodi

ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಚಿಕ್ಕೋಡಿಯ ಹಣಬರ ಯಾದವ ಸಮಾಜದಿಂದ ಪಾದಯಾತ್ರೆ

Share

ಬೆಳಗಾವಿ ಜಿಲ್ಲೆ ಹಣಬರ ( ಯಾದವ ) ಸಮಾಜ ಸೇವಾ ಸಂಘ ಚಿಕ್ಕೋಡಿ ಇವರ ನೇತೃತ್ವದಲ್ಲಿ ಹಿಂದೂಳಿದ ವರ್ಗದ ಹಣಬರ, ಯಾದವ ಸಮಾಜದ ಏಕೈಕ ಶಾಸಕಿಯಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಂಪುಟದರ್ಜೆಯಲ್ಲಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಹಣಬರ ಯಾದವ ಸಮಾಜ ಭಾಂದವರಿಂದ ಚಿಕ್ಕೋಡಿಯಿಂದ ಬೆಳಗಾವಿ ಜಿಲ್ಲಾಧಿಕಾರಿಯ ಕಚೇರಿಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.

ರಾಜ್ಯದಲ್ಲಿ ಯಾದವ ಜನಾಂಗ ಅನೇಕ ಒಳಪಂಗಡಗಳು ಸೇರಿ ಸುಮಾರು ನಾಲವತ್ತು (40) ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ ಅದರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಹಣಬರ ಸಮಾಜ ನಾಲ್ಕು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ ಆದರೂ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಲೇ ಬಂದಿದೆ ಅದಕ್ಕಾಗಿ ರಾಜ್ಯದಲ್ಲಿ ಯಾದವ ಜನಾಂಗದ ಏಕೈಕ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ ಅವರಿಗೆ ಸಚಿವಸ್ಥಾನ ನೀಡಬೇಕೆಂದು ಒತ್ತಾಯಿಸಿ ಸೋಮವಾರ ಚಿಕ್ಕೋಡಿಯಿಂದ ಪಾದಯಾತ್ರೆ ಪ್ರಾರಂಭವಾಗಿ ಬುಧವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಯವರಿಗೆ ಮನವಿ ಸಲ್ಲಿಸಿ ಪಾದಯಾತ್ರೆ ಮುಕ್ತಾಯವಾಗಲಿದೆ.

ಈ ಸಂದರ್ಭದಲ್ಲಿ ಚಿಕ್ಕೋಡಿ ಹಣಬರ ಯಾದವ ಸಂಘಟನೆಯ ಅಧ್ಯಕ್ಷ ಶೀತಲ ಮುಂಡೆ, ಕಾರ್ಯದರ್ಶಿ ಮಹಾದೇವ ಕರೋಲೆ. ಎಸ್ ಬಿ ಪೂಜೇರಿ. ಡಿ ಆರ್ ಬಾಡಕರ. ರಾಮಾ ವಟಗೂಡೆ. ಅಪ್ಪಾಸಾಬ ನಾಯಿಕ, ರಾಮಾ ಪೂಜೇರಿ, ವಸಂತ ಖೋತ್, ರಾಯಬಾಗ ತಾಲೂಕಿನ ರಮೇಶ ಹಣಮಂತಗೋಳ, ಎನ್ ಆರ್ ಪಾಟೀಲ, ಅಪ್ಪನ್ನ ಪಾಟೀಲ, ಅಣ್ಣಾಸಾಬ ಪಾಟೀಲ, ಬಾಳು ಮದಿಹಳ್ಳಿ, ಮಂಜುನಾಥ ಕರಾಕಾಯಿ, ರಾಜು ಹೆಬ್ಬಾಳೆ, ಸೇರಿದಂತೆ ಹಣಬರ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

Tags:

error: Content is protected !!