ಬೆಳಗಾವಿ ಶಾಹುನಗರದ ಯೂನಿವರ್ಸಲ್ ಶೋಟೋಕಾನ್ ಕರಾಟೆ ತಂಡದವರು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಗೋಲ್ಡನ್ ಕರಾಟೆ ಸ್ಪೋಟ್ರ್ಸ್ ಸಂಘದಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಹಲವು ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಬಾಲಕರ ವಿಭಾಗದಲ್ಲಿ ಪ್ರಜ್ವಲ್ ಕಾಂಬ್ಳೆ, ನೀರಜ್ ಎ. ಸಿಂಗ್, ವಿಶಾಂಕ್ ಶಹಾಪುರ ಚಿನ್ನದ ಪದಕ ಗಳಿಸಿದ್ದಾರೆ. ಭುವನ್ ಆರ್. ಶಾನಬಾಗ್ ಮತ್ತು ಪ್ರಜ್ವಲ್ ಪಾಟೀಲ ಬೆಳ್ಳಿ ಪದಕ ಪಡೆದಿದ್ದಾರೆ. ಎಂ.ನೂತನ್, ಶ್ರೇಯಸ್ ವನ್ನೂರ್, ಧ್ರುವ ಎಸ್. ಶಿಂಧೆ, ಶಿವಂ ಆರ್. ಸೂರ್ಯವಂಶಿ ಕಂಚಿನ ಪದಕಗಳಿಗೆ ಕೊರಳೊಡ್ಡಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಶ್ರದ್ಧಾ ಆರ್. ಸೂರ್ಯವಂಶಿ, ನವ್ಯಾ ಬಿ.ಪಿಳ್ಳೈ, ಕಾವೇರಿ ಪಿ. ಸೂರ್ಯವಂಶಿ ಹಾಗೂ ಕರಿμÁ್ಮ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವನಿ ಶೆಂಬೇಕರ್ ಕಂಚಿನ ಪದಕ ಗೆದ್ದಿದ್ದಾರೆ.
ಈ ಪಟುಗಳು ಕರಾಟೆ ತರಬೇತುದಾರ ರಾಜು ರಜಪೂತ್ ಮಾರ್ಗದರ್ಶನದಲ್ಲಿ ಪಾಲ್ಗೊಂಡಿದ್ದರು. ವಿವಿಧ ಭಾಗಗಳಿಂದ 500ಕ್ಕೂ ಹೆಚ್ಚಿನ ಪಟುಗಳು ಟೂರ್ನಿಯಲ್ಲಿ ಭಾಗವಹಿಸಿದ್ದರು.