Banglore

ಮುಖ್ಯ ನಾಯಮೂರ್ತಿಗಳ ಪೀಠಕ್ಕೆ ಕೇಸ್ ವರ್ಗಾವಣೆ ಬಗ್ಗೆ ಹಿಜಾಬ್ ಪರ ವಕೀಲರು ಹೇಳಿದ್ದೇನು..?

Share

ಹಿಜಾಬ್ ಪ್ರಕರಣದ ಬಗ್ಗೆ ಹೈಕೋರ್ಟ ನ್ಯಾಯಾಧೀಶರು ತುಂಬಾ ಸಮಾಧಾನದಿಂದ ನಮ್ಮ ವಾದ-ವಿವಾದವನ್ನು ಕೇಳಿ ಒಂದು ನಿರ್ಣಯಕ್ಕೆ ಬಂದಿದ್ದಾರೆ. ಇದು ಅತ್ಯಂತ ದೊಡ್ಡ ಸಾಂವಿಧಾನಿಕ ವಿಷಯವಾಗಿರುವ ಹಿನ್ನೆಲೆಯಲ್ಲಿ ಇದನ್ನು ತೀರ್ಮಾನ ಮಾಡಲು ಉನ್ನತ ಪೀಠ ಇರಬೇಕು ಎಂದು ಸಿಜೆ ಅವರಿಗೆ ನಿರ್ಣಯ ಮಾಡಲು ಮನವಿ ಮಾಡಿಕೊಂಡಿದ್ದಾರೆ ಎಂದು ಹಿಜಾಬ್ ಪರ ವಕೀಲ ಶತಬೀಶ್ ಶಿವಣ್ಣ ತಿಳಿಸಿದ್ದಾರೆ.

ಹಿಬಾಬ್ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡಿರುವ ವಿಚಾರಕ್ಕೆ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಹಿಜಾಬ್ ಪರ ವಕೀಲ ಶತಬೀಶ್ ಶಿವಣ್ಣ ನಿನ್ನೆ ನ್ಯಾಯಾಧೀಶರು ಸತತ ಮೂರು ಗಂಟೆ ವಿಚಾರಣೆ ಮಾಡಿದ್ದಾರೆ. ಇಂದು ಮತ್ತೆ ಅವರು ಪರಿಶೀಲನೆ ಮಾಡಿ ಒಂದು ನಿರ್ಣಯಕ್ಕೆ ಬಂದಿದ್ದಾರೆ. ಈ ವಿಷಯ ಬಹಳ ತೀವ್ರವಾಗಿ ಬೆಳವಣಿಗೆ ಆಗುತ್ತಿದೆ. ಇದೀಗ ಮತ್ತೆ ಸಲ್ಲಿಸಿರುವ ಅರ್ಜಿಗಳನ್ನು ಸೇರಿಸಿ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇಡುತ್ತಿದ್ದಾರೆ. ಮುಸ್ಲಿಂ ಕಾನೂನು, ಹಿಂದೂ ಕಾನೂನಿನ ಬಗ್ಗೆ ವಿವರವಾಗಿ ಆಲೋಚನೆ ಮಾಡಿ ತೀರ್ಪು ನೀಡಬೇಕಾಗುತ್ತದೆ. ಎಲ್ಲಾ ಅರ್ಜಿಗಳನ್ನು ಸೇರಿಸಿ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇಡುತ್ತಿದ್ದಾರೆ. ಈ ಸಾಂವಿಧಾನಿಕ ವಿಷಯವನ್ನು ದೊಡ್ಡ ಪೀಠ ನಿರ್ಧಾರ ಮಾಡಿದ್ರೆ ಇಡೀ ಸಮಾಜಕ್ಕೆ ಉಪಯೋಗ ಆಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿಗಳಿಗೆ ತಿಳಿಸಿದ್ದಾರೆ.

 

 

Tags:

error: Content is protected !!