ಬೆಳಗಾವಿ ನಗರದಲ್ಲಿ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸಾವಯವ ಕೃಷಿಕರ ರೈತರ ಮೆಗಾ ಮಾರ್ಟನ್ನು ಲೋಕಾರ್ಪಣೆ ಮಾಡಲಾಯಿತು

ಬೆಳಗಾವಿ ನಗರದ ಗೋವಾವೇಸ್ ನ ಬಸವೇಶ್ವರ ಸರ್ಕಲ್ ಹತ್ತಿರ ಸುಮಾರು 5ಸಾವಿರ ಚದರ್ ಅಡಿ ಬೃಹತ್ ಕಟ್ಟಡದಲ್ಲಿ ಬೆಳಗಾವಿ ನಗರದಲ್ಲಿ ವಿನೂತನವಾಗಿ ಸಾವಯವ ಕೃಷಿಕರ ಬೃಹತ್ ಮೆಗಾ ಮಾರ್ಟ ಗೋಕುಲ್ ಇಂಟರ್ ನ್ಯಾಶನಲ್ ಎಲ್ ಎಲ್ ಪಿ ಯನ್ನು ಇಂದು ಸೋಮವಾರ ಸಾಯಂಕಾಲ ಉದ್ಘಾಟಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು ರಿಬ್ಬನ್ ಕತ್ತರಿಸಿ, ದೀಪಬೆಳಗಿಸುವ ಮೂಲಕ ನೂತನ ಮೆಗಾ ಮಾರ್ಟನ್ನು ಉದ್ಘಾಟಿಸಿದರು.

ಇನ್ನು ಮೆಗಾ ಮಾರ್ಟ್ ಉದ್ಘಾಟಿಸಿ ಮಾತನಾಡಿದ ಮುಖ್ಯ ಮಂತ್ರಿಗಳ ಮಾಜಿ ವಿಶೇಷ ಪ್ರತಿನಿಧಿ ದೆಹಲಿ ಶಂಕರಗೌಡ ಪಾಟೀಲ್, ಹಣಮಂತ ಗೌಡ ರವರ ಸಾಧನೆ ಹೊಗಳಿದರು. ಗೌಡರು ಹೇಳಿದಂತೆಯೇ ಈ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ಇನ್ನು ಮಗಳು ಎಂಎಸ್ಸಿ ಅಗ್ರಿಕಲ್ಚರ್ ಓದಿ ಈ ಕಾರ್ಯದಲ್ಲಿ ಅವರಿಗೆ ಸಹಾಯ ಮಾಡುತತಿದ್ದಾರೆ. ಅವರ ಕುಟುಂಬಸ್ಥರೂ ಹಣಮಂತಗೌಡ ಈ ಕಾರ್ಯದಲ್ಲಿ ಸಹಾಯ ಮಾಡುತ್ತಿದ್ದಾರೆ. ಜನರ ಹಾಗೂ ರೈತರ ಹಿತ ದೃಷ್ಟಿಯಿಂದ ಅವರ ಈ ಕಾರ್ಯ ಉತ್ತಮವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ರೈಲ್ವೆ ಪೊಲೀಸ್ ವಿಭಾಗದ ಎಡಿಜಿಪಿ ಭಾಸ್ಕರ್ರಾವ್ ರವರು, ಹಣಂಮತ ಗೌಡರು ಕುಟುಂಬ ಸಮೇತರಾಗಿ ಈ ಕಾರ್ಯ ಮಾಡಿತ್ತಿದ್ದಾರೆ. ಗರಾಮಹಕರಿಗೆ ಆರೋಗ್ಯದ ಹಾಗೂ ರೈತರಿಗೆ ಉತ್ತಮ ಬೆಲೆ ಸಿಗುವ ನಿಟ್ಟಿನಲ್ಲಿ ಅನುಕೂಲ ಮಾಡುತ್ತಿದ್ದಾರೆ. ರೈತರ ಅನುಕೂಲಕರ ದೃಷ್ಟಿಯಿಂದ ಇದು ಒಳ್ಳೆಯ ಕಾರ್ಯವಾಗಿದೆ. ಇವರು ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಪದಾರ್ಥಗಳನ್ನು ವಿದೇಶಗಳಿಗೆ ಕಳಿಸಿ ಕೊಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತರಕಾರಿ ವಿದೇಶಕ್ಕೆ ಕಳಿಸಿಕೊಡುವಂತಾಗಬೇಕು. ಈ ಸಂದರ್ಭದಲ್ಲಿ ಹನುಮಂತಗೌಡರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಾಷಯ ತಿಳಿಸಿದರು.
ಇನನು ಈ ವಿಶೇಷ ಕಾರ್ಯಕ್ಕೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಿದ ಕೆಎಫ್ಸಿಸಿಐನ ಸಿಎಸ್ಆರ್ ಕಮಿಟಿಯ ಅಧ್ಯಕ್ಷರಾದ ಡಾ.ವಿ.ಜಿ ಕಿರಣ್ಕುಮಾರ್, ಕೋವಿಡ್ ಸಂದರ್ಭದಲ್ಲಿ ಹಣಮಂತಗೌಡ ಜಿಎಚ್ ಮಾಡಿದ ಕಾಯಧ ಅನನ್ಯವಾದುದು. ಹಣಮಂತಗೌಡ ಸರ್ ಹಾಗೇ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎಂದು ಹೇಳುತ್ತಿದ್ದರು. ಆದರ ಈಗ ಹೇಳಿದಂತೆ ಮಾಡಿಯೇ ತೋರಿಸಿದ್ದಾರೆ. ಹನುಮಂತ ಗೌಡ ಈ ರೀತಿ ದೊಡ್ಡ ಪ್ರಮಾಣದಲ್ಲಿ ಮೆಗಾ ಮಾರ್ಟ್ ಮಾಡುತ್ತಾರೆ ಎಂದಿದ್ದರೆ, ನಾನು ನನ್ನ ಟೀಂ ಸಮೇತ ಬರುತ್ತಿದ್ದೆ. ಹಾಹಾಗಿ ಮುಂಬರುವ ದಿನಗಳಲ್ಲಿ ನಾನು ಈ ಕುರಿತಂತೆ ಎಲ್ಲ ರೀತಿಯಲ್ಲಿ ನಾನು ಸಹಾಯ ಮಾಡುತ್ತೇನೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಎಶಸ್ಸನ್ನು ಗಳಿಸಿ ಎಂದು ಶುಭ ಹಾರೈಸಿದರು.
ಇನ್ನು ಗ್ರಾಹಕರ ಆರೋಗ್ಯ ದೃಷ್ಟಿಯಿಂದ ಸಾವಯವ ಆಹಾರ ಪದಾರ್ಥಗಳನ್ನು ಜನರಿಗೆ ನೀಡುವ ಉದ್ದೇಶದಿಂದ ಈ ಆರ್ಟ ಸೈಆಪನೆ ಮಾಡಲಾಗಿದೆ. ಇನ್ನು ಬೆಳಗಾವಿ ನಗರದ ಗ್ರಾಹಕರು ಉತ್ತಮ ಆರೋಗ್ಯಕ್ಕಾಗಿ ಇಲ್ಲಿ ಸಿಗುವ ಸಾವಯವ ರೀತಿಯಲ್ಲಿ ಬೆಳೆದ ಆಹಾರ ಪಧಾರ್ಥಗಳನ್ನು ಬಳಕೆ ಮಾಡಿ. ಈ ಮೂಲಕ ರಾಜ್ಯದ ರೈತರ ಹಿತವನ್ನು ಕಾಪಾಡಿ ಎನ್ನುವುದು ಎಲ್ಲರ ಆಶಯ.