ಪತ್ರಕರ್ತರೆಂದು ಹೇಳಿಕೊಂಡು ತಮ್ಮ ಗ್ರಾಮ ಪಂಚಾಯಿತಿಯ ದೈನಂದಿನ ಕೆಲಸ-ಕಾರ್ಯಗಳಿಗೆ ತೊಂದರೆ ಉಂಟುಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಖಾನಾಪುರ ತಾಲೂಕಿನ ಭೂರಣಕಿ ಗ್ರಾಮ ಪಂಚಾಯತ ವತಿಯಿಂದ ಬೆಳಗಾವಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳಿಗೆ ರವರಿಗ ಮನವಿ ಸಲ್ಲಿಸಲಾಯುತು.

ತಾವು ಪ್ರತಕರ್ತರೆಂದು ಹೇಳಿಕೊಂಡು ಮಾಸ್ಕೇನಟ್ಟಿ ಗ್ರಾಮದ ನಿವಾಸಿ ಹಾಗೂ ಸುರಪುರ ಕೇರವಾಡ ಗ್ರಾಮದ ಯುವಕರು ಗ್ರಾಮ ಪಂಚಾಯತದ ದೈನಂದಿನ ಕಾರ್ಯ ನಡೆಯುವಲ್ಲಿ ತೊಂದರೆ ಮಾಡುತ್ತಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಖಾನಾಪೂರ ತಾಲೂಕಿನ ಭೂರಣಕಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಸದಸ್ಯರು ಬೆಳಗಾವಿ ಜಿಲ್ಲಾ ಪೆÇೀಲಿಸ್ ವರಿμÁ್ಠಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ತಾವು ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸುತ್ತೇವೆ. ನಾವು ಯೂಟ್ಯೂಬ್ ಪತ್ರಕರ್ತರೆಂದು ಹೇಳಿಕೊಂಡು ಮೇಲಿಂದ ಮೇಲೆ ಗ್ರಾಂ.ಪಂ ಕಚೇರಿಗೆ ಭೇಟಿ ನೀಡಿ ವಿಡಿಯೋ ಶೂಟಿಂಗ್ ಮಾಡುತ್ತಿದ್ದಾರೆ. ನಮ್ಮ ಗ್ರಾಮ ಪಂಚಾಯಿತಿ ಬಗ್ಗೆ ಅಸಭ್ಯ ಭಾμÉ ಬಳಸಿ, ಪಂಚಾಯಿತಿಯಲ್ಲಿ ಕೋಟಿಗಟ್ಟಲೆ ಅವ್ಯವಹಾರ ನಡೆದಿದೆ ಎಂದು ಆರೋಪಿಸುವ ಮತ್ತು ನಮ್ಮನು ಅಪರಾಧಿಗಳೆಂದು ಬಿಂಬಿಸುವ ಸುದ್ದಿಗಳನ್ನು ತಯಾರಿಸಿ ಬಿತ್ತರಿಸುತ್ತಾರೆ.ಇದರಿಂದಾಗಿ ಗ್ರಾಮ ಪಂಚಾಯಿತಿನ ಜನಪ್ರತಿನಿಧಿಗಳಿಗೆ, ಪಿಡಿಒ, ಕಾರ್ಯದರ್ಶಿ ಹಾಗೂ ಸಿಬ್ಬಂದಿ ಗೆ ತೊಂದರೆ ಉಂಟಾಗುತ್ತಿದೆ.
ಇದರಿಂದ ಕಾಮಗಾರಿಗಳನ್ನು ನಿರ್ವಹಿಸಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸೇರಿದಂತೆ ಸದಸ್ಯರು ಸೇರಿ ಪೆÇೀಲಿಸ್ ವರಿμÁ್ಠಧಿಕಾರಿಗಳಿಗೆ ಇವರಿಬ್ಬರ ವಿರುದ್ಧ ಲಿಖಿತ ದೂರನ್ನು ಸಲ್ಲಿಸಿದ್ದೇವೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಬಾರಕ್ ಕಿತ್ತೂರ, ಉಪಾಧ್ಯಕ್ಷೆ ವಿದ್ಯಾ ಪಾಟೀಲ್, ಸದಸ್ಯರಾದ ಮಲ್ಲಪ್ಪ ತಳವಾರ, ವಿಠ್ಠಲ ಸಾಗರೇಕರ, ಶ್ರೀದೇವಿ ಬಡಿಗೇರ, ಗೀತಾ ಕೋಲಕಾರ, ಮಂಜುನಾಥ ದೊಡಮನಿ,ಬೇಬಿಜಾನ ಪಾಟೀಲ್ ಸೇರಿದಂತೆ ಇನ್ನಿತರ ಇನ್ನಿತರರು ಉಪಸ್ಥಿತರಿದ್ದರು.
ಅಲ್ತಾಫ್ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ