ರೇಪ್ ಮತ್ತು ಹತ್ಯಾಕಾಂಡಕ್ಕೆ ಸಂಬAಧಿಸಿದAತೆ ಜೈಲ್ನಲ್ಲಿ ಶಿಕ್ಷೆ ಅನುಭವಿಸುತ್ತಿರು ಡೇರಾ ಸಚ್ಚಾ ಸೌಧ್ನ ಪ್ರಮುಖ ಗುರ್ಮಿತ್ ರಾಮ ರಹೀಮ್ ಅವರನ್ನ ಪೆರೋಲ್ ಆಧಾರದ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಗುರ್ಮಿತ್ ಹರಿಯಾಣಾ ಜೈಲಿನಲ್ಲಿ ಶಿಕ್ಷೆಗೆ ಒಳಪಟ್ಟಿದ್ದು, ಪಂಜಾಬ್ ಚುನಾವಣೆಯ ೧೩ ದಿನ ಮೊದಲು ಜೈಲಿನಿಂದ ಅವರನ್ನ ಬಿಡುಗಡೆ ಮಾಡಲಾಗಿದೆ. ಪಂಜಾಬ್ನಲ್ಲಿ ಇವರ ೨೩ ಜಿಲ್ಲೆಗಳಲ್ಲಿ ೩೦೦ ಅತಿ ದೊಡ್ಡ ಸಂಸ್ಥಾನಗಳಿವೆ. ಪಂಜಾಬ್ನ ಮಾಝಾ, ಮಾಲವಾ ಮತ್ತು ದೋಆಬಾದಲ್ಲಿ ತಮ್ಮದೇಯಾದ ವರ್ಚಸ್ಸನ್ನ ಹೊಂದಿದೆ. ಡೇರಾ ಸಚ್ಚಾ ಸೌಧ್ ಹರಿಯಾಣಾದ ಸಿರಸಾ ಜಿಲ್ಲೆಯಲ್ಲಿದೆ. ಮಾಲವಾ ರೀಜನ್ನ ಸುಮಾರು ೬೯ ಸೀಟ್ ಇಲ್ಲಿ ಆಯ್ಕೆಯಾಗುತ್ತವೆ.

ಗುರ್ಮಿತ್ ರಾಮರಹೀಮ್ ಅವರನ್ನ ಬಿಡುಗಡೆಗೊಳಿಸಿದ ಹಿನ್ನೆಲೆ ಸುನಾರಿಯಾ ಜೈಲ್ನ ಹೊರಗೆ ಭಾರಿ ಬಂದೋಬಸ್ತ್ ಒದಗಿಸಲಾಗಿತ್ತು. ಸಿರಸಾ ಡೇರಾದ ಪ್ರಮುಖರು ರಾಮರಹೀಮ್ ಅವರ ೨೧ ದಿನದ ರಜೆ ಅರ್ಜಿಯನ್ನ ಹರಿಣಾಯಾದ ಜೈಲು ಪ್ರಮುಖರಿಗೆ ಸಲ್ಲಿಸಿದ್ದರು. ಅದಕ್ಕೆ ಈಗ ಮಂಜೂರಾತಿ ದೊರೆತಿದೆ. ರೋಹತಕ್ನ ಕಮೀಷ್ನರ್ ಅವರು ಹಸ್ತಾಕ್ಷರ ಹಾಕಿದ ಬಳಿಕ ಗುರ್ಮಿತ್ ರಾಮ ರಹೀಮ್ ಅವರನ್ನ ಪೆರೋಲ್ ಆಧರಿಸಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.