State

ನಾಡೋಜ ಚೆನ್ನವೀರ ಕಣವಿ ಅಗಲಿಕೆಗೆ ಸದನದಲ್ಲಿ ಸಂತಾಪ

Share

ನಾಡೋಜ ಚೆನ್ನವೀರ ಕಣವಿ ಅವರ ನಿಧನಕ್ಕೆ ವಿಧಾನಮಂಡಲ ಅಧಿವೇಶನದಲ್ಲಿ ಸಂತಾಪ ಸೂಚಿಸಲಾಯಿತು. ಈ ವೇಳೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಜಗದೀಶ ಶೆಟ್ಟರ್ ಚೆನ್ನವೀರ ಕಣವಿ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.

ಬುಧವಾರ ವಿಧಾನಸಭೆಯಲ್ಲಿ ಅಧಿವೇಶನ ಆರಂಭವಾಗುತ್ತಿದ್ದಂತೆ ವಿಧಾನಸಭೆಯ ಮಾಜಿ ಸದಸ್ಯ ಎಚ್.ಡಿ.ಚೌಡಯ್ಯ, ಹಿರಿಯ ಕವಿ, ನಾಡೋಜ ಡಾ.ಚೆನ್ನವೀರ ಕಣವಿ ಅವರಿಗೆ ಸಂತಾಪ ಸೂಚಿಸುವ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದರು.

ಇದೇ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ನಾಡೋಜ ಚೆನ್ನವೀರ ಕಣವಿ ಅವರು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅದೇ ರೀತಿ ಚೌಡಯ್ಯನವರು ಕೂಡ ನಮ್ಮನ್ನು ಅಗಲಿದ್ದಾರೆ. ಚೆನ್ನವೀರ ಕಣವಿ ಅವರು ಓರ್ವ ಸೃಜನಶೀಲ ವ್ಯಕ್ತಿ ಮತ್ತು ಕವಿ. ಅತ್ಯಂತ ಸೂಕ್ಷ್ಮ ಮನಸ್ಥಿತಿಯವರು, ಪ್ರತಿಯೊಂದು ಮಾತನ್ನು ಯೋಚನೆ ಮಾಡಿ ತರ್ಕಬದ್ಧ ಮತ್ತು ತೂಕಬದ್ಧ ಮಾತುಗಳು ಅವರಿಂದ ಬರುತ್ತಿದ್ದವು. ಅದೇ ರೀತಿ ಧರ್ಮಪತ್ನಿ ಕೂಡ ಕವಿಯಿತ್ರಿಯಾಗಿದ್ದರು. ಇದೀಗ ಒಬ್ಬರೊಬ್ಬರೇ ಸಾಹಿತಿಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ದಿಗ್ಗಜ ಕವಿಗಳ ಸ್ಥಾನವನ್ನು ತುಂಬುವಂತಹ ಉತ್ಕøಷ್ಟವಾಗಿರುವ ಸೃಜನಶೀಲ ಸಾಹಿತ್ಯ ಇಂದಿಗೆ ಅವಶ್ಯಕತೆಯಿದೆ. ಜ್ಞಾನಪೀಠ ಪ್ರಶಸ್ತಿ ಪಡೆದುಕೊಳ್ಳುವವರು ಮತ್ತು ಚಿಂತನಶೀಲರ ಸಂಖ್ಯೆ ಹೆಚ್ಚಾಗಬೇಕಿದೆ. ಚೆನ್ನವೀರ ಕಣವಿ ಅವರು ತಮ್ಮ ಲೇಖನಗಳು, ಸಾಹಿತ್ಯ, ಕವಿತೆಯ ಮೂಲಕ ನಮ್ಮ ಜೊತೆಗೆ ಸದಾಕಾಲ ಇರುತ್ತಾರೆ ಎಂದು ಆಶಿಸಿದರು.

ನಂತರ ಸಿದ್ದರಾಮಯ್ಯ ಅವರು ಮಾತನಾಡಿ ಚೆನ್ನವೀರ ಕಣವಿ ಅವರು ಬಹಳ ಸೌಮ್ಯ ಸ್ವಭಾವದ ವ್ಯಕ್ತಿ. ಅಪಾರ ಜ್ಞಾನ ಹೊಂದಿದ್ದ ಕವಿಯಾಗಿದ್ದರು. ಬಹಳಷ್ಟು ಕವನ ಸಂಕಲನಗಳನ್ನು ಬರೆದಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಗಾಗಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಮೃದುವಾಗಿ ಸತ್ಯವನ್ನೇ ಮಾತನಾಡುತ್ತಿದ್ದರು. ಅವರಿಗೂ ಕೂಡ ಜ್ಞಾನಪೀಠ ಪ್ರಶಸ್ತಿ ಸಿಗಬೇಕಿದೆ. ಅದೇ ರೀತಿ ರಾಷ್ಟ್ರಕವಿ ಆಗುವ ಎಲ್ಲ ಅರ್ಹತೆ ಅವರಲ್ಲಿ ಇತ್ತು ಎಂದು ಸ್ಮರಿಸಿಕೊಂಡರು.

ಬಳಿಕ ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ ಕಳೆದ ವಾರ ಆಸ್ಪತ್ರೆಗೆ ಹೋಗಿ ನಾವು ನೋಡಿಕೊಂಡು ಬಂದಿದ್ದೇವು. ಆದರೆ ಇಂದು ಬೆಳಗಿನ ಅವರ ಅಗಲಿಕೆಯ ಸುದ್ದಿ ನಮ್ಮೆಲ್ಲರನ್ನು ಆಘಾತಗೊಳಿಸಿದೆ. ಚೆನ್ನವೀರ ಕಣವಿ ಸಾಹಿತ್ಯ ಲೋಕಕ್ಕೆ ದೊಡ್ಡ ಸೇವೆ ಸಲ್ಲಿಸಿದ್ದಾರೆ. ಅದರಲ್ಲಿಯೂ ಓರ್ವ ಕವಿಯಾಗಿ ಅತ್ಯುತ್ತಮ ಕವನಗಳನ್ನು ನಾಡಿಗೆ ಕೊಟ್ಟಿದ್ದಾರೆ ಅದೇ ರೀತಿ ಅವರಿಗೆ ರಾಷ್ಟ್ರಕವಿ ಪ್ರಶಸ್ತಿಯನ್ನು ನೀಡುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದರು.

 

Tags:

error: Content is protected !!