Banglore

ನರೇಂದ್ರ ಮೋದಿ ದೇಶ ಹಾಳು ಮಾಡ್ತಿದ್ದಾರೆ: ಸಿದ್ದರಾಮಯ್ಯ ವಾಗ್ದಾಳಿ

Share

ಕೇಂದ್ರ ಸರ್ಕಾರದಿಂದ ನಮ್ಮ ಪಾಲಿಗೆ ಬರಬೇಕಿರುವ ಅನುದಾನ ಕೇಳಲು ಹಿಂದಿನ ಸಿಎಂ ಯಡಿಯೂರಪ್ಪಗೂ ಧಮ್ ಇರಲಿಲ್ಲ, ಇಂದಿನ ಸಿಎಂ ಬಸವರಾಜ್ ಬೊಮ್ಮಾಯಿಗೂ ಧಮ್ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರದಿಂದ ಅನುದಾನ ಕೇಳುವ ಧಮ್ ಹಿಂದಿನ ಯಡಿಯೂರಪ್ಪಗೆ ಆಗಲಿ, ಇಂದಿನ ಬಸವರಾಜ್ ಬೊಮ್ಮಾಯಿಗೆ ಆಗಲಿ ಇಲ್ಲ. ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿದ್ದ ನಮ್ಮ ಶೇರ್, ಅನುದಾನ ಕಡಿಮೆಯಾಗಿದೆ. ಮೊದಲೆಲ್ಲಾ ಕೇಂದ್ರ ಪುರಸ್ಕøತ ಕಾರ್ಯಕ್ರಮಗಳಿಗೆ ಶೇ.75-80ರಷ್ಟು ಅನುದಾನ ರಾಜ್ಯಕ್ಕೆ ಬರುತ್ತಿತ್ತು. ಆದರೆ ಅದನ್ನು ಶೇ.50ಕ್ಕೆ ಇಳಿಸಿದ್ದಾರೆ. ಅವರ ಕಾರ್ಯಕ್ರಮಗಳಿಗೆ ಅನುದಾನ ಕಡಿಮೆ ಮಾಡಿದ್ದಾರೆ. ಬಡವರಿಗೆ ಒಂದೇ ಒಂದು ಮನೆ ಮಂಜೂರು ಮಾಡಿದ್ದಾರಾ ಹೇಳಿ, ಹಳೆ ಬಿಲ್ ಕೊಟ್ಟಿದ್ದಾರಾ ಹೇಳಲಿ ನೋಡೋಣ. ಭವಿಷ್ಯದೆಡೆ ಭರವಸೆಗಳ ಹೆಜ್ಜೆ ಎಂದು ಜಾಹೀರಾತು ಕೊಟ್ಟಿದ್ದೆ ಕೊಟ್ಟಿದ್ದು. ಎಲ್ಲಿದೆ ಭವಿಷ್ಯ ಎಂದು ವ್ಯಂಗ್ಯವಾಡಿದರು.

ಇನ್ನು ನಮ್ಮ ರಾಜ್ಯದ ರಾಜ್ಯಸಭೆ ಸದಸ್ಯೆ ನಿರ್ಮಲಾ ಸೀತಾರಾಮನ್ ಹಾಗೂ 25 ಜನ ಎಂಪಿಗಳಿಗೆ ನರೇಂದ್ರ ಮೋದಿ ಜೊತೆಗೆ ಮಾತನಾಡಲು ಧೈರ್ಯವೇ ಇಲ್ಲ. ನರೇಂದ್ರ ಮೋದಿ ಅವರು ಇದೆಲ್ಲಾ ಮಾಡದೇ ವಂಶಪಾರಂಪರ್ಯ ಆಡಳಿತ ದೇಶಕ್ಕೆ ಅಪಾಯಕಾರಿ ಎಂದು ಪಾರ್ಲಿಮೆಂಟ್‍ನಲ್ಲಿ ಭಾಷಣ ಹೊಡೆಯುತ್ತಿದ್ದಾರೆ. ಮೋದಿ ಈ ದೇಶವನ್ನು ಎಲ್ಲಾ ಹಾಳು ಮಾಡಿ ಇಟ್ಟಿದ್ದಾರೆ. ದೇಶ ದಿವಾಳಿಯಾಗುತ್ತಿದೆ. 135 ಲಕ್ಷ 87 ಸಾವಿರ ಕೋಟಿ ಈ ವರ್ಷದ ಅಂತ್ಯಕ್ಕೆ ದೇಶದ ಸಾಲ ಆಗುತ್ತದೆ. ಈ ಬಜೆಟ್‍ನಲ್ಲಿ 11 ಲಕ್ಷ 59 ಸಾವಿರ ಕೋಟಿ ಸಾಲ ಮಾಡುತ್ತೇವೆ ಎಂದು ಹೇಳಿದ್ದಾರೆ. ವರ್ಷಕ್ಕೆ 9 ಲಕ್ಷ ಚಿಲ್ಲರೆ ಕೋಟಿ ಬಡ್ಡಿ ಕಟ್ಟುತ್ತಾರೆ. ಇದರಿಂದ ಒಳ್ಳೆಯ ಬಜೆಟ್ ನಿರೀಕ್ಷೆ ಮಾಡಲು ಹೇಗೆ ಸಾಧ್ಯ ಎಂದು ಸಿದ್ದರಾಮಯ್ಯ ಆರೋಪಿಸಿದರು.

Tags:

error: Content is protected !!